Friday 11 December 2015

ಫ್ಲ್ಯಾನೆಲ್ ಬೋರ್ಡ್ ನಿರ್ವಹಣೆಯ ಉಪಯೋಗಗಳು

'ತರಗತಿಗೊಂದು ಫ್ಲ್ಯಾನೆಲ್ ಬೋರ್ಡ್' ಇದು ಪ್ರತಿಯೊಂದು ಶಾಲೆಗಳಲ್ಲಿ ಕಡ್ಡಾಯವಾಗಿ
ಇರಲೇಬೇಕಾದ ಪರಿಕರ. ವಿದ್ಯಾರ್ಥಿಗಳು ಕಲಿಕೆಯಿಂದ ಪ್ರೇರಿತರಾಗಿ ತಂಮ ಭಾಷಾ
ಕೌಶಲಗಳನ್ನು ಹಾಗೂ ಇತರ ಯಾವುದೇ ಸೃಜನಾತ್ಮಕ ಅಭಿವ್ಯಕ್ತಿಗಾಗಿ ಇದೊಂದು ಪುಟ್ಟ
ವೇದಿಕೆ.
ನಂಮ ಕೊಡಚಿ ಶಾಲೆಯಲ್ಲಿ ಈ ಫ್ಲ್ಯಾನೆಲ್ ಬೋರ್ಡ್ ಈ ರೀತಿಯಾಗಿ ಬಳಕೆಯಲ್ಲಿದೆ.
1. ಮಕ್ಕಳು ಪ್ರತಿದಿನ ಒಂದೊಂದು ಕತೆ,ಕವನ(ಸ್ವರಚಿತ/ಸಂಗ್ರಹ) ಹಾಗೂ ಇತರೆ
ಮಾಹಿತಿಯನ್ನು ಕೈಬರಹದ ಮೂಲಕ ಬರೆದು ಬೋರ್ಡಿಗೆ ಲಗತ್ತಿಸುತ್ತಾರೆ.
2. ಪ್ರತಿ ವಾರಕ್ಕೆ ಎಲ್ಲ ಬರಹಗಳಲ್ಲಿ ಉತ್ತಮವಾದುದನ್ನು ಆಯ್ದು ಗೋಡೆ ಪತ್ರಿಕೆ
ತಯಾರಿಸಲಾಗುತ್ತಿದೆ.
3. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೂ ಉತ್ತೇಜಿಸಲಾಗುತ್ತಿದೆ.
ಫ್ಲ್ಯಾನೆಲ್ ಬೋರ್ಡ್ ಬಳಕೆಯ ಉಪಯೋಗಗಳು:
ವಿದ್ಯಾರ್ಥಿಗಳು ವಿಷಯ ಸಂಗ್ರಹಣೆಗಾಗಿ ಹೆಚ್ಚಿನ ಓದಿನ ಕಡೆ ಗಮನ ಕೊಡುತ್ತಾರೆ.
ಸಾಹಿತ್ಯಿಕ ಹಾಗೂ ವೈಜ್ಞಾನಿಕ ಮನೋಭಾವ ಹೊಂದುತ್ತಾರೆ.
ಪ್ರಯತ್ನಶೀಲತೆ ಹಾಗೂ ಸಂಶೋಧನಾ ಮನೋಭಾವ ಹೊಂದುತ್ತಾರೆ.
ವಿಷಯ ಸಂಗ್ರಹಣೆ,ಓದು ಹಾಗೂ ಬರವಣಿಗೆಯಿಂದಾಗಿ ಅನುರೂಪ ಕಲಿಕಯುಂಟಾಗುತ್ತದೆ.
ಇಷ್ಟೆಲ್ಲ ಅನೂಕೂಲಗಳು ಈ ಪುಟ್ಟ ಪರಿಕರದಿಂದ ಸಾಧ್ಯ ಎಂದಾದಲ್ಲಿ ತಡ ಏಕೆ?
ಇವತ್ತೇ ಫ್ಲ್ಯಾನೆಲ್ ಬೋರ್ಡ್ ಸಜ್ಜುಗೊಳಿಸಿ

Friday 4 December 2015

ಪಡೆಯೋಣ ತರಬೇತಿ ; ಕಲಿಯೋಣ ಸಂಸ್ಕೃತಿ

--- ಸಚಿನ್ ಕುಮಾರ ಬ.ಹಿರೇಮಠ


ಒಂದು ದೇಶದ ಸಂಪನ್ಮೂಲಗಳಲ್ಲಿ ಆ
ದೇಶದ ಕಲೆ ಮತ್ತು ಸಂಸ್ಕೃತಿಯೂ
ಒಂದು. ನಮ್ಮ ದೇಶದಲ್ಲಿ
ವಿಭಿನ್ನ ಪ್ರದೇಶಕ್ಕನುಗುಣವಾಗಿ
ವಿಭಿನ್ನ ಹಾಗೂ ಅಪರೂಪವೆನಿಸುವ ಕಲೆ
ಮತ್ತು ಸಂಸ್ಕೃತಿಗಳು
ನಮಗೆ ಸಿಗುತ್ತವೆ. ವಿವಿಧತೆಯಲ್ಲಿ
ಏಕತೆಯನ್ನು ಸಾಧಿಸುವ ನಮ್ಮ ದೇಶ
ತನ್ನೆಲ್ಲ ಕಲೆ ಮತ್ತು
ಸಂಸ್ಕೃತಿಗಳನ್ನು ಹೆತ್ತ ತಾಯಿಯಂತೆ
ಒಂದೇ ಸಮನಾಗಿ ಕಾಣುತ್ತದೆ.
ವಿಶಾಲವಾಗಿರುವ ತನ್ನೆಲ್ಲ
ಪ್ರದೇಶಗಳನ್ನು, ಆ ಭಾಗದ ವಿವಿಧ
ಕಲೆಗಳನ್ನು ಹಾಗೂ ಅಲ್ಲಿನ
ಮನೋಜ್ಞ ಸಂಸ್ಕೃತಿಯನ್ನು
ಶಿಕ್ಷಣದೊಂದಿಗೆ ಮೇಳೈಸಿ ಪರಸ್ಪರ
ಪರಿಚಯಿಸಲು ಕೇಂದ್ರ ಸರ್ಕಾರದ
ಸಾಂಸ್ಕೃತಿಕ ಮಂತ್ರಾಲಯದ
ಅಂಗ ಸಂಸ್ಥೆಯಾಗಿ 1979ರಿಂದ
ಸಾಂಸ್ಕೃತಿಕ ಸಂಪನ್ಮೂಲ ಮತ್ತು
ತರಬೇತಿ ಕೇಂದ್ರ(Centre For
Cultural Resource and Training)
ನವದೆಹಲಿ ಎಂಬ ಸಂಸ್ಥೆ ಅಹರ್ನಿಶಿ
ಶ್ರಮಿಸುತ್ತಿದೆ.
ಈ ಮೂಲಕ ಶಿಕ್ಷಣದೊಂದಿಗೆ
ಸಂಸ್ಕೃತಿಯನ್ನು ಬೆರೆಸಿ ಭಾರತದ
ಬಗೆಗಿನ ಸಾಂಸ್ಕೃತಿಕ ವೈಭವವನ್ನು
ಪ್ರಶಂಸಿಸಲು ನೆರವಾಗುತ್ತಿದೆ. ಆ
ದೇಶದ ಸಂಸ್ಕೃತಿಯನ್ನು
ತಿಳಿದುಕೊಂಡು ಅದನ್ನು ಪ್ರಸ್ತುತ
ಶೈಕ್ಷಣಿಕ ವ್ಯವಸ್ಥೆಯಲ್ಲಿ
ಅಚ್ಚುಕಟ್ಟಾಗಿ ಅರಿತುಕೊಂಡಾಗ
ಮಾತ್ರ ನಮ್ಮ ದೇಶದ ಸಂಸ್ಕೃತಿಯ
ಸಂರಕ್ಷಣೆ ಸಾಧ್ಯ ಎಂಬುದು ಈ
ಸಿಸಿಆರ್ಟಿ ಆಶಯ.
ಸಾಂಸ್ಕೃತಿಕ ಸಂಪನ್ಮೂಲ ಮತ್ತು
ತರಬೇತಿ ಕೇಂದ್ರದ ಉದ್ದೇಶಗಳು :
- ಶಾಲಾ ಕಾಲೇಜು ವಿದ್ಯಾರ್ಥಿಗಳ
ಮೂಲಕ ಸಂಸ್ಕೃತಿಯ ಪ್ರಸಾರ
- ವರ್ಷವಿಡೀ ಶಾಲಾ ಕಾಲೇಜು
ಶಿಕ್ಷಕರಿಗೆ ವಿವಿಧ
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವುದರ
ಮೂಲಕ ಭಾರತೀಯ ಕಲೆ ಮತ್ತು
ಪರಿಚಯ ಮೂಡಿಸುವುದು.
- ಶಾಲಾ ಪಠ್ಯಕ್ರಮದಂತೆ ಕರಕುಶಲ
ಕಲೆಗಳ ಪ್ರಾಯೋಗಿಕ ಜ್ಞಾನ
ನೀಡುವುದು.
- ವಿವಿಧ ಕಲೆಗಳಾದ ನಾಟಕ, ಸಂಗೀತ,
ರೂಪಕಗಳು, ಶಾಸ್ತ್ರೀಯ ನೃತ್ಯ
ಮುಂತಾದವುಗಳ ಅರಿವು
ಮೂಡಿಸಲು ಕಾರ್ಯಾಗಾರಗಳನ್ನು
ಹಮ್ಮಿಕೊಳ್ಳುವುದು.
- ಭಾರತೀಯ ಸಾಂಸ್ಕೃತಿಕ ಹಾಗೂ
ಪ್ರಾಕೃತಿಕ ಪರಂಪರೆಯ
ಸಂರಕ್ಷಣೆಗಾಗಿ ಶಾಲಾ
ಕಾಲೇಜುಗಳಲ್ಲಿ
ಜಾಗೃತಿ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವುದು.
- ನಗರ ಹಾಗೂ ಗ್ರಾಮೀಣ ಭಾಗದ
ವಿವಿಧ ಕಲೆಗಳ ಹಾಘೂ ಸಂಸ್ಕೃತಿಯ
ಸಂಪನ್ಮೂಲಗಳನ್ನು
ಸಂಗ್ರಹಿಸಿ ಪ್ರಸಾರ ಮಾಡುವುದು.
- 10 ರಿಂದ 14 ವರ್ಷದ ಮಕ್ಕಳಿಗಾಗಿ
ರಾಷ್ಟ್ರೀಯ ಸಾಂಸ್ಕೃತಿಕ
ಪ್ರತಿಭಾನ್ವೇಷಣಾ
ಸ್ಪರ್ಧೆಗಳನ್ನು ಏರ್ಪಡಿಸಿ
ಪ್ರೋತ್ಸಾಹಕಗಳನ್ನು ನೀಡುವುದು.
- ಶಾಲಾ ಕಾಲೇಜುಗಳಲ್ಲಿ
ಸಾಂಸ್ಕೃತಿಕ ಕ್ಲಬ್ ರಚಿಸಿ ಸಾಂಸ್ಕೃತಿಕ
ಶಿಕ್ಷಣವನ್ನು
ಉತ್ತೇಜಿಸುವುದು.
ಯಾರು ಭಾಗವಹಿಸಬಹುದು?
- 50 ವರ್ಷದೊಳಗಿನ ಎಲ್ಲಾ
ಸರ್ಕಾರಿ/ಅರೆಸರ್ಕಾರಿ/ಅನುದಾನಿತ/
ಅನುದಾನರಹಿತ ಪ್ರಾಥಮಿಕ
ಶಾಲಾ ಶಿಕ್ಷಕರು, ಪ್ರೌಢ ಶಾಲಾ
ಶಿಕ್ಷಕರು ಹಾಗೂ ಕಾಲೇಜು
ಉಪನ್ಯಾಸಕರು
- ದೈಹಿಕ ಶಿಕ್ಷಕರು ಹಾಗೂ
ಮುಖ್ಯೋಪಾಧ್ಯಯರು/
ಪ್ರಾಂಶುಪಾಲರನ್ನು ಹೊರತು ಪಡಿಸಿ
ಎಲ್ಲ
ವಿಷಯದ ಶಿಕ್ಷಕರು
ಭಾಗವಹಿಸುವಿಕೆ ಹೇಗೆ?
ಮೇಲಿನ ಕಾರ್ಯಕ್ರಮಗಳಲ್ಲಿ
ಪಾಲ್ಗೊಳ್ಳಲು ಇಚ್ಛಿಸುವ ಶಿಕ್ಷಕರು
ಸಾಂಸ್ಕೃತಿಕ ಸಂಪನ್ಮೂಲ
ಮತ್ತು ತರಬೇತಿ ಕೇಂದ್ರ
ನಿಯೋಜಿಸಿರುವ ರಾಜ್ಯದಲ್ಲಿನ
ಆಯಾ ಜಿಲ್ಲಾ ಸಂಪನ್ಮೂಲ
ವ್ಯಕ್ತಿ(DRP)ಗಳನ್ನು ಸಂಪರ್ಕಿಸಿ
ತಮ್ಮ ಹೆಸರು
ನೋಂದಾಯಿಸಿಕೊಳ್ಳಬೇಕು. ಬಳಿಕ
ಹೀಗೆ
ನೋಂದಾಯಿಸಿಕೊಂಡ ಶಿಕ್ಷಕರುಗಳಿಗೆ
ಜಿಲ್ಲಾ ಮಟ್ಟದ ತರಬೇತಿ
ಆಯೋಜಿಸಲಾಗುತ್ತದೆ. ಆ ತರಬೇತಿ
ಪೂರ್ಣಗೊಳಿಸಿದ ಬಳಿಕ ಸಿ ಸಿ ಆರ್ ಟಿ ವೆಬ್
ಸೈಟಿನಲ್ಲಿ ಆಯಾ ವರ್ಷದ
ಕ್ಯಾಲೆಂಡರ್ ಅವಧಿಗೆ
ವಿವಿಧ ಕಾರ್ಯಾಗಾರಗಳನ್ನು
ಆಯೋಜಿಸಿರುವ ಬಗ್ಗೆ ಮಾಹಿತಿ
ಲಭ್ಯವಿರುತ್ತದೆ. ಅದರ ಪ್ರಕಾರ
ಶಿಕ್ಷಕರು ತಾವು ಇಚ್ಛಿಸುವ
ಕಾರ್ಯಾಗಾರಕ್ಕೆ ತೆರಳುವ ಬಗ್ಗೆ
ಜಿಲ್ಲಾ ಸಂಪನ್ಮೂಲ
ವ್ಯಕ್ತಿ(DRP)ಗಳಿಗೆ ಮನವಿ
ಸಲ್ಲಿಸಬೇಕಾಗುತ್ತದೆ. ಸದರಿ ಜಿಲ್ಲಾ
ಸಂಪನ್ಮೂಲ
ವ್ಯಕ್ತಿ(DRP)ಗಳು ತರಬೇತಿಗೆ
ಆಯ್ಕೆಗೊಂಡ ಶಿಕ್ಷಕರ ಪಟ್ಟಿಯನ್ನು
ಸಾರ್ವಜನಿಕ ಶಿಕ್ಷಣ
ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ
ಕಳಿಸಿ ಅನುಮತಿ ಪಡೆದು
ಕಾರ್ಯಾಗಾರಕ್ಕೆ ಹಾಜರಾಗಲು
ಆದೇಶಪ್ರತಿಯನ್ನು ಆಯ್ಕೆಗೊಂಡ
ಶಿಕ್ಷಕರಿಗೆ ಕಳಿಸುತ್ತಾರೆ. ಬಳಿಕ
ಶಿಕ್ಷಕರು ಮೊದಲು ತಮ್ಮ
ಸ್ವಂತ ಖರ್ಚಿನಲ್ಲಿಯೇ
ಕಾರ್ಯಾಗಾರಕ್ಕೆ ಹಾಜರಾಗಿ ಸೂಕ್ತ
ಪ್ರಯಾಣದ ವಿವರಗಳನ್ನು ಸಲ್ಲಿಸಿ
ದಿನ ಭತ್ಯೆ ಹಾಗೂ ಪ್ರಯಾಣ
ಭತ್ಯೆಯನ್ನು
ಪಡೆದುಕೊಳ್ಳಬಹುದು.ಉಚಿತ ವಸತಿ
ಹಾಗೂ ಊಟೋಪಚಾರ
ವ್ಯವಸ್ಥೆಯಿರುತ್ತದೆ.
ಕಾರ್ಯಾಗಾರದಲ್ಲಿ ಏನೇನಿರುತ್ತದೆ?
ಈ ಮೇಲೆ ತಿಳಿಸಿದಂತೆ
ಕಾರ್ಯಾಗಾರವು ಭಾರತೀಯ ಕಲೆ
ಮತ್ತು ಸಂಸ್ಕೃತಿ
ಕುರಿತಾಗಿರುವುದರಿಂದ ಹೆಚ್ಚಿನ ವಿಷಯ
ಅದರ ಮೇಲೆ
ಕೇಂದ್ರೀಕೃತವಾಗಿರುತ್ತದೆ. ವಿವಿಧ
ರಾಜ್ಯಗಳ ಶಿಕ್ಷಕರುಗಳು
ಕಾರ್ಯಾಗಾರದಲ್ಲಿರುವುದರಿಂದ
ವಿವಿಧ ರಾಜ್ಯಗಳ ಕಲೆಗಳು ಸಂಸ್ಕೃತಿ,
ಭಾಷೆ ಹಾಗೂ ವೈವಿಧ್ಯತೆಯ
ಪರಿಚಯವಾಗುತ್ತದೆ. ಪ್ರತಿ
ರಾಜ್ಯದಿಂದ ಒಂದು ಸಾಂಸ್ಕೃತಿಕ
ಕೊಡುಗೆಯಾಗಿ ಶಿಕ್ಷಕರು
ಯಾವುದಾದರು ಒಂದು ಕಲೆ ಅಥವಾ
ಸಂಸ್ಕೃತಿಯನ್ನು ಪ್ರದರ್ಶನ
ಮಾಡಬೇಕಾಗಿರುತ್ತದೆ. ಕ್ಷೇತ್ರ
ಪ್ರವಾಸ, ಕರಕುಶಲ, ರಂಗಕಲೆ ಹಾಗೂ
ಗೊಂಬೆಯಾಟ(Pupperty)
ಮುಂತಾದವುಗಳ ಪರಿಚಯ ಹಾಗೂ
ಪ್ರಾಯೋಗಿಕ ಅನುಭವವಾಗುತ್ತದೆ.
ಕಾರ್ಯಾಗಾರದ ವಿಷಯಗಳಾವುವು?
ಒಂದು ಕ್ಯಾಲೆಂಡರ್ ವರ್ಷದಲ್ಲಿ ವಿವಿಧ
ಕಾರ್ಯಾಗಾರಗಳು ಈ
ಕೆಳಗಿನಂತಿರುತ್ತವೆ.
- ಭಾರತೀಯ ಸಾಂಸ್ಕೃತಿಕ ಹಾಗೂ
ಪ್ರಾಕೃತಿಕ ಪರಂಪರೆಯ
ಸಂರಕ್ಷಣೆಯಲ್ಲಿ ಶಾಲೆಗಳ ಪಾತ್ರ
- ಶಿಕ್ಷಣದಲ್ಲಿ ಗೊಂಬೆಯಾಟದ
ಪಾತ್ರ
- ಶಾಲಾ ಶಿಕ್ಷಣದಲ್ಲಿ ಸಂಕಲಿತ
ಕರಕುಶಲ ಕಲೆಗಳು
- ನಮ್ಮ ಸಾಂಸ್ಕೃತಿಕ ವೈವಿಧ್ಯತೆ
- ನಾವೀನ್ಯತೆಯ ತರಬೇತಿ
(ಹೈಸ್ಕೂಲ್ ಶಿಕ್ಷಕರು ಮತ್ತು ಜಿಲ್ಲಾ
ಸಂಪನ್ಮೂಲ ವ್ಯಕ್ತಿಗಳಿಗೆ
ಮಾತ್ರ)
- ಶಿಕ್ಷಣದಲ್ಲಿ ರಂಗಕಲೆ
ಕಾರ್ಯಾಗಾರ ಎಲ್ಲೆಲ್ಲಿ
ನಡೆಯುತ್ತವೆ?
ದೇಶದ ವಿವಿಧ ಕಲೆಗಳು ಹಾಗೂ
ಸಾಂಸ್ಕೃತಿಕ ಪರಿಚಯವಾಗಲಿ ಎಂಬ
ಕಾರಣಕ್ಕೆ ಕಾರ್ಯಾಗಾರ ದೇಶದ
ವಿವಿಧ ಭಾಗಗಳಲ್ಲಿ ನಡೆಯುತ್ತವೆ.
ಉತ್ತರ ಭಾಗ : ನವದೆಹಲಿ, ಜಮ್ಮು
ಕಾಶ್ಮೀರ
ದಕ್ಷಿಣ ಭಾಗ : ಹೈದರಾಬಾದ್,
ಮುಂಬಯಿ, ಪುಣೆ, ಚೆನ್ನೈ,ಮೈಸೂರು,
ಬೆಂಗಳೂರು
ಪಶ್ಚಿಮ ಭಾಗ : ಉದಯಪುರ್
ಮಧ್ಯ ಭಾಗ : ಭೋಪಾಲ್
ಪೂರ್ವ ಭಾಗ : ಪಾಟ್ನಾ,
ಕೋಲ್ಕೋತ್ತಾ, ಭುವನೇಶ್ವರ್
ಈಶಾನ್ಯ ಭಾಗ : ಗ್ಯಾಂಗ್ಟೋಕ್,
ಗುವಾಹಟಿ, ಇಟಾನಗರ್, ಐಝ್ವಾಲ್,
ತರಬೇತಿಯ ನಂತರ ಏನು?
ತರಬೇತಿ ಪೂರ್ಣಗೊಳಿಸಿದ ಬಳಿಕ ಅಲ್ಲಿ
ತಿಳಿದುಕೊಂಡ ವಿಷಯವನ್ನು ನಮ್ಮ
ಶಾಲಾ ಹಂತದಲ್ಲಿ
ಅನುಷ್ಠಾನಕ್ಕೆ ತರುವುದು.
ಶಾಲೆಗಳಲ್ಲಿ 'ಸಾಂಸ್ಕೃತಿಕ ಕ್ಲಬ್' ನ್ನು
ರಚಿಸಿ ವಿವಿಧ
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಬಹುದು.ಇದಕ್ಕೆ ಸಿ ಸಿ
ಆರ್ ಟಿ ಯಿಂದ ಅನುದಾನವೂ
ಲಭಿಸುತ್ತದೆ. ಅಲ್ಲದೇ ನಮ್ಮ
ರಾಜ್ಯದ ವಿವಿಧ ಕಲೆ ಹಾಗೂ
ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ
ಸಂಶೋಧನೆ ಕೈಗೊಂಡು ಅದನ್ನು
ದೇಶದೆಲ್ಲೆಡೆ ಪರಿಚಯಿಸಬಹುದು.
ಕಾರ್ಯಾಗಾರದಲ್ಲಿ
ಭಾಗವಹಿಸಿದಾಗ ನಮ್ಮ ದೇಶದ ಕಲೆ
ಮತ್ತು ಸಂಸ್ಕೃತಿಯ ಇಡಿಯಾದ
ಪರಿಚಯವಾಗುವುದರಿಂದ ಉತ್ಸಾಹಿ
ಶಿಕ್ಷಕರು ಭಾಗವಹಿಸುವುದು ಒಳಿತು.
ಸಾಧ್ಯವಾದರೇ ಇಂದಿನಿಂದಲೇ
ನಿಮ್ಮ ಪ್ರಯತ್ನ ಆರಂಭಿಸಿ.
ಸಾಂಸ್ಕೃತಿಕ ಸಂಪನ್ಮೂಲ ಮತ್ತು
ತರಬೇತಿ ಕೇಂದ್ರ ನವದೆಹಲಿ ಸಂಪರ್ಕ
ವಿಳಾಸ :
ಸಾಂಸ್ಕೃತಿಕ ಸಂಪನ್ಮೂಲ ಮತ್ತು
ತರಬೇತಿ ಕೇಂದ್ರ ನವದೆಹಲಿ,
ಸಾಂಸ್ಕೃತಿಕ ಮಂತ್ರಾಲಯ, ಭಾರತ
ಸರ್ಕಾರ
15 –A ಸೆಕ್ಟರ್ -7, ದ್ವಾರಕಾ, ನವದೆಹಲಿ
110075
ದೂರವಾಣಿ : (011)25088638,25309300
ಫ್ಯಾಕ್ಸ್ : (011)25088637
ಇಮೇಲ್ : dir.ccrt@nic.in

Saturday 28 November 2015

ಕನಕದಾಸ ಜಯಂತಿ 2015

ನಂಮ ಕೊಡಚಿ ಶಾಲೆಯಲ್ಲಿ
ಕನಕದಾಸ ಜಯಂತಿಯನ್ನು
ಆಚರಿಸಲಾಯಿತು.ಶಿಕ್ಷಕರಾದ
ಜಿ.ಗೋಣೆಪ್ಪ, ಹಳೆಯ
ವಿದ್ಯಾರ್ಥಿಗಳಾದ ಸಕ್ರೆಪ್ಪ, ರಾಜು
ಮಾತನಾಡಿದರು. ಕನಕದಾಸ
ಗ್ರಾಮೀಣ ಯುವಕರ ಸಂಘದ
ವತಿಯಿಂದ ಸಿಹಿ ಹಂಚಲಾಯಿತು.

Monday 23 November 2015

ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರ -- ಪ್ರಸೆಂಟ್ ಸಾರ್ --ಡಿ.ಎಂ.ಪ್ರಶಾಂತ ಕುರ್ಕೆ

ವಿದ್ಯಾರ್ಥಿಗಳ ಹಾಜರಾತಿ ಕೊರತೆಯ
ಕಾರಣದಿಂದ ಸರ್ಕಾರಿ ಶಾಲೆಗಳನ್ನು
ಮುಚ್ಚುವ ಪರಿಸ್ಥಿತಿಯನ್ನು
ಕಟ್ಟಿಕೊಡುವ ಕಿರುಚಿತ್ರ ಆಕರ್ಷ ಕಮಲ
ನಿರ್ದೇಶನದ 'ಪ್ರಸೆಂಟ್ ಸಾರ್'.
ಗಡಿನಾಡಿನ ಕನ್ನಡ ಶಾಲೆಗಳ ಪರಿಸ್ಥಿತಿ
ಅವಲೋಕಿಸುತ್ತಲೇ ಈ ಭಾಗದಲ್ಲಿ
ಕನ್ನಡ ಭಾಷೆಯ ದುಸ್ಥಿತಿಗೆ ಕನ್ನಡಿ
ಹಿಡಿಯುತ್ತದೆ. ಗಡಿಭಾಗದಲ್ಲಿ ಕನ್ನಡ
ಅರೆಜೀವವಾಗುತ್ತಿದೆ. ಈ ಭಾಗದಲ್ಲಿ
ಶಾಲೆಯಲ್ಲಿ ಕಲಿತರಷ್ಟೆ ಕನ್ನಡ.
ಇಲ್ಲವಾದರೆ ಗಡಿಗೆ ಹೊಂದಿಕೊಂಡಿರುವ
ರಾಜ್ಯಗಳ ಭಾಷೆಯೇ
ಮಾತೃಭಾಷೆಯಾಗುತ್ತದೆ.
'ಪ್ರಸೆಂಟ್ ಸಾರ್' ಚಿಕ್ಕಬಳ್ಳಾಪುರ
ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ
ವಾಟದ ಹೊಸಹಳ್ಳಿ ಶಾಲೆಯ ಪರಿಸರದ
ಕಥೆ. ಈಗಡಿನಾಡಿನ ಶಾಲೆ ಒಂದು
ಪ್ರಾತಿನಿಧಿಕ ಅಷ್ಟೇ. ರಾಜ್ಯದ ಬೇರೆ
ಬೇರೆ ಭಾಗಗಳಲ್ಲೂ ಹಾಜರಾತಿ
ಕೊರತೆಯಿಂದ ಶಾಲೆಗಳನ್ನು ಮುಚ್ಚುವ
ಸ್ಥಿತಿಯನ್ನು ಇದು
ಅಭಿವ್ಯಕ್ತಿಸುತ್ತದೆ.
ಎರಡನೇ ಮಹಾಯುದ್ಧದ ವೇಳೆ
ಶಾಲೆಯೊಂದರ ಮೇಲೆ ಆಗುವ
ಪರಿಣಾಮ ಹಾಗೂ ಅಲ್ಲಿಯ ಒಬ್ಬ
ಹುಡುಗನ ಸುತ್ತ ಫ್ರೆಂಚ್ ಲೇಖಕ
ಆಲ್ಫೋನ್ಸ್ ದೋದೆ ಹೆಣೆದಿರುವ
'ಲಾಸ್ಟ್ ಲೆಸೆನ್' ಸಣ್ಣ ಕಥೆಯನ್ನು
ಆಧರಿಸಿದ್ದು 'ಪ್ರಸೆಂಟ್ ಸಾರ್'.
ಮೂಲಕಥೆಯನ್ನು ಕಥೆಗಾರ ಕೇಶವ
ಮಳಗಿ 'ಕೊನೆಯ ಪಾಠ' ಹೆಸರಿನಲ್ಲಿ
ಕನ್ನಡಕ್ಕೆ ರೂಪಾಂತರಿಸಿದ್ದರು.
ಬೊಂಬೆಗಳ ಬಗ್ಗೆ ಆಸಕ್ತನಾಗಿರುವ
ಸಿದ್ದು ಎನ್ನುವ ಹುಡುಗನ ಪಾತ್ರದ
ಮೂಲಕ ಕಿರುಚಿತ್ರ ಸಾಗುತ್ತದೆ. ಜತೆಗೆ
ಕನ್ನಡದ ಶಿಕ್ಷಕರೊಬ್ಬರ ಭಾಷಾ
ಪ್ರೇಮದ ಕಳ್ಳು– ಬಳ್ಳಿ ನಂಟು. ಕನ್ನಡ
ಶಾಲೆಯ ಮುಚ್ಚುವಿಕೆಯ ಬಗ್ಗೆ
ಹೇಳುತ್ತಲೇ ಅಲ್ಲೊಂದು
ಸಕಾರಾತ್ಮಕ ಅಂಶಗಳನ್ನು ಬಿತ್ತಿ
ಬೆಳೆದಿದ್ದಾರೆ ನಿರ್ದೇಶಕರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ
ಅಂತರರಾಷ್ಟ್ರೀಯ
ಕಿರುಚಿತ್ರೋತ್ಸವ ಮತ್ತು ಸುಚಿತ್ರ
ಫಿಲ್ಮ್ ಸೊಸೈಟಿಯಲ್ಲಿ 'ಪ್ರಸೆಂಟ್ ಸಾರ್'
ಪ್ರದರ್ಶನಗೊಂಡಿತ್ತು. ಗೋಪಾಲಕೃಷ್ಣ
ಅಡಿಗರ 'ಎದೆಯು ಮರಳಿ ತೊಳಲುತಿದೆ...' ,
ಎಂ.ಆರ್. ಕಮಲ ಅವರ 'ಮುಗಿಲ ಮರೆಗೆ
ಸರಿದು ಮಿಂಚು ಮರಿಗಳೇ...' ಮೊದಲಾದ
ಅರ್ಥವಂತಿಕೆಯ ಪದ್ಯಗಳನ್ನು
ಚಿತ್ರಕಥೆಯ ಸಾರದೊಳಗೆ
ಬಳಸಿಕೊಂಡಿರುವುದು ಕಿರುಚಿತ್ರದ
ಹೆಚ್ಚುಗಾರಿಕೆ.
'ನನ್ನಮ್ಮ ಬಾಲ್ಯದ ಪ್ರತಿ
ಹಂತದಲ್ಲೂ ಭಾಷೆ ಬಗ್ಗೆ ಪ್ರೀತಿ, ಗೌರವ,
ಒಲವನ್ನು ಬೆಳೆಸಿದಳು. ಮನೆಯ
ದಿನನಿತ್ಯದ ಹರಟೆಗಳಲ್ಲೂ ಕನ್ನಡದ
ಸಿನಿಮಾ, ಭಾವಗೀತೆ, ಸಾಹಿತ್ಯ
ಸಂಬಂಧಿ ಚರ್ಚೆಗಳು ನಡೆಯುತ್ತಿದ್ದವು.
ಹೀಗೆ ಕನ್ನಡದ ಹಲವು ಮಾಧ್ಯಮಗಳ
ಬಗ್ಗೆ ತಿಳಿಯುತ್ತಾ ಹೋದೆ.
ದಿನಕ್ಕೊಂದು ಸಿನಿಮಾ ನೋಡುವುದು
ಇವತ್ತಿಗೂ ನನ್ನ ಅಭ್ಯಾಸ. ಅದು
ಯಾವುದೇ ಭಾಷೆಯಾದರೂ ಸರಿ.
ಸಿನಿಮಾ ಮಾಧ್ಯಮದ ಕಡೆ ಆಕರ್ಷಣೆ
ಬೆಳೆಯಿತು. ನಿರ್ದೇಶಕನಾಗುವ ಆಸೆ.
ಆದರೆ ಯಾವುದರ ಬಗ್ಗೆ ಕಥೆ
ಹೆಣಿಯುವುದು ಎನ್ನುವ ಜಿಜ್ಞಾಸೆ.
ಇತ್ತೀಚಿನ ದಿನಗಳಲ್ಲಿ ಕನ್ನಡದ
ಹಲವು ಪ್ರಮುಖ ಪತ್ರಿಕೆಗಳಲ್ಲಿ
ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ
ಬಗ್ಗೆ ಪ್ರಕಟವಾದ ಸುದ್ದಿಯಿಂದಾಗಿ
ಅವುಗಳ ಸ್ಥಿತಿ, ಮಾತೃಭಾಷೆ ಕಲಿಕೆ,
ಸರ್ಕಾರದ ನಿಲುವು ಹೀಗೆ ಚರ್ಚೆ
ಬಿರುಸಾಗಿತ್ತು.
ಇವುಗಳು ನನಗೆ ಮುಖ್ಯವಾದವು.
ಅದರಲ್ಲೂ ಕಡಿಮೆ ಸಮಯದಲ್ಲಿ ಹೆಚ್ಚು
ಖರ್ಚಿಲ್ಲದೆ ನನ್ನ ಕನಸನ್ನು
ಪರಿಣಾಮಕಾರಿಯಾಗಿ
ಸಾಕಾರಗೊಳಿಸಲು ಸುಂದರ
ಅವಕಾಶವಾಗಿ ಕಿರು ಚಿತ್ರ ನಿರ್ಮಾಣ
ಒದಗಿತು. ಇಂಗ್ಲಿಷ್ ಮಾಧ್ಯಮದಲ್ಲಿ
ಓದಿ, ಬರೆದು, ಹೊರದೇಶಗಳಿಗೆ ಹೋಗಿ
ಬೇರೆ ಭಾಷೆಗಳನ್ನು ಕಲಿತು ಕನ್ನಡ
ಭಾಷೆಯ ಉಳಿಯುವಿಕೆಯ ಬಗ್ಗೆ ಭಾಷಣ
ಬಿಗಿಯುವುದು ಎಷ್ಟು ಸಹಜ ಅನ್ನುವುದು
ನನಗೆ ನಾನೇ ಕೇಳಿಕೊಂಡ ಪ್ರಶ್ನೆ.
ಈ ಪ್ರಶ್ನೆಗೆ ಹಾಗೂ ಕನ್ನಡ
ಮಾಧ್ಯಮ ಶಾಲೆಗಳ ಬಗೆಗಿನ ಹಲವು
ಕುತೂಹಲಗಳಿಗೆ ಉತ್ತರ ಹುಡುಕುವ
ಪ್ರಯತ್ನ ನನ್ನ ಮೊದಲನೇ
ಕಿರುಚಿತ್ರ ಪ್ರೆಸೆಂಟ್ ಸಾರ್ '
ಎನ್ನುತ್ತಾರೆ ಆಕರ್ಷ. ರಾಜ್ಯದ
ಸರ್ಕಾರಿ ಶಾಲೆಗಳಲ್ಲಿ ಕಿರುಚಿತ್ರವನ್ನು
ಪ್ರದರ್ಶಿಸಬೇಕು ಎನ್ನುವ ಹಂಬಲ
ನಿರ್ದೇಶಕರದ್ದು.
ನವೀನ್ ಸಾಗರ್ ಅವರ ಕಥೆ–ಚಿತ್ರಕತೆಗೆ
ನಾವೀನ್ಯ ತುಂಬಿ ಹಾಜರಾತಿಯನ್ನು
ಅಂದಗೊಳಿಸಿರುವವರು
ಛಾಯಾಗ್ರಾಹಕರಾದ ಕುಮಾರ್ ಗೌಡ
ಮತ್ತು ಕಲಾ ನಿರ್ದೇಶಕರಾದ ಮಧುರಾ
ರಾಮನ್ ಮತ್ತು ಸ್ಪರ್ಶ. ಕಿರಣ್
ಮಿಡಿಗೇಶಿ ಸಂಕಲನ, ವಿಕಾಸ್ ವಸಿಷ್ಠ
ಸಂಗೀತ ಚಿತ್ರಕ್ಕಿದೆ. ಚಂದ್ರಮ್ಮ,
ರಾಘವೇಂದ್ರ, ಗೋಪಾಲಕೃಷ್ಣ
ದೇಶಪಾಂಡೆ 'ಪ್ರಸೆಂಟ್ ಸಾರ್'ನ
ಬಳಗದಲ್ಲಿದ್ದಾರೆ.
*
ಕನ್ನಡದ ಲೇಖಕಿ ಎಂ.ಆರ್. ಕಮಲ ಅವರ
ಮಗ ಆಕರ್ಷ. ಫ್ರಾನ್ಸ್ನಲ್ಲಿ ನೆಲೆಸಿರುವ
ಅವರು ವೃತ್ತಿಯಲ್ಲಿ ಎಂಜಿನಿಯರ್.
ಕೌಟುಂಬಿಕ ವಾತಾವರಣ ಅವರಲ್ಲಿ
ಸಾಹಿತ್ಯವನ್ನು ಬಿತ್ತಿದೆ
ಎನ್ನುವುದಕ್ಕೆ ಕಿರುಚಿತ್ರದಲ್ಲಿ
ಬಳಸಿರುವ ಪದ್ಯಗಳೇ ಸಾಕ್ಷಿ. ಆಕರ್ಷ
ಅವರ ಕನ್ನಡ ಪದ್ಯಗಳು ಕೆಲವು
ಪತ್ರಿಕೆಗಳಲ್ಲೂ ಪ್ರಕಟವಾಗಿವೆ.
ಇಂಗ್ಲಿಷ್ನಲ್ಲಿ ಅವರು ಬರೆದ ಕಥೆ
ಕಿರುಚಿತ್ರವಾಗಿದೆ.

Saturday 21 November 2015

ಓದುವೆ ನಾನು ; ಬೆಳೆಯುವೆ ನಾನು

ಕನ್ನಡವನ್ನೇ ಓದಲು ಬರದಿದ್ದರೆ ಉಳಿದ ವಿಷಯಗಳನ್ನು ಹೇಗೆ ಕಲಿಸುವುದು?
ಅದಕ್ಕೆಂದೇ ಓದುವಿಕೆಯ ಸಮಸ್ಯೆಯಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಓದುವೆ ನಾನು ಕಾರ್ಡ್ ಗಳನ್ನು ನೀಡಲಾಗುತ್ತಿದೆ. ಅಕ್ಷರ, ಪದ,ಪದಗುಚ್ಛ, ವಾಕ್ಯ ಎಂಬ 4 ತಂಡ ರಚಿಸಿ ಸೂಕ್ತ ಕಲಿಕೋಪಕರಣಗಳಿಂದ ಕಲಿಸಲಾಗುತ್ತಿದೆ. ಗೈರು ಹಾಜರಾತಿ ಸಮಸ್ಯೆಯಿರುವ ಕಾರಣ ಇದು ವೇಗ ಪಡೆದುಕೊಳ್ಳಲಾಗುತ್ತಿಲ್ಲವಾದರೂ ಕನಿಷ್ಠ ಬದಲಾವಣೆಯಾಗುತ್ತಿದೆ.ಶಿಕ್ಷಕರು ಸಾಕಷ್ಟು ಸಹಕರಿಸುತ್ತಿದ್ದಾರೆ

Friday 20 November 2015

ನೀರೇಕೆ ಸಾರ್ವತ್ರಿಕ ದ್ರಾವಕ?

ನೀರು ಸಾರ್ವತ್ರಿಕ ದ್ರಾವಕ ಹೇಗೆ ಅಂತ ಇವತ್ತಿನ ತರಗತಿಯಲ್ಲಿ ಪ್ರಯೋಗಗಳ ಮೂಲಕ ತಿಳಿಸಲಾಯಿತು. ಸೀಮೆ ಎಣ್ಣೆ, ನೀರು ಹಾಗೂ ಕೊಬ್ಬರಿ ಎಣ್ಣೆಗಳನ್ನು ದ್ರಾವಕಗಳೆಂದೂ, ಉಪ್ಪು, ಸಕ್ಕರೆ ಮತ್ತು ತಾಮ್ರದ ಸಲ್ಫೇಟ್ ನ್ನು ದ್ರಾವ್ಯಗಳೆಂದೂ ಪರಿಚಯಿಸಿ ಯಾವ ದ್ರಾವಕವು ಹೆಚ್ಚು ದ್ರಾವ್ಯಗಳನ್ನು ಕರಗಿಸಿಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸಲು ತಿಳಿಸಲಾಯಿತು.
ವಿದ್ಯಾರ್ಥಿಗಳು ತಾವೇ ಕಂಡುಹಿಡಿದಂತೆ ಖುಷಿಪಟ್ಟರು.
ಬೆಳಕಿನ ಲಕ್ಷಣಗಳನ್ನೂ ತಿಳಿದುಕೊಳ್ಳಲಾಯಿತು

Wednesday 18 November 2015

ವಾರದ ವಿಜ್ಞಾನ ಪ��ರಯೋಗಗಳು : ನೀರಿನ ಲಕ್ಷಣಗಳ

ನೀರು ಯಾವ ಧಾತುಗಳಿಂದಾಗಿದೆ? ಎಂದಾಗ ಹೈಡ್ರೋಜನ್ ಆಕ್ಸಿಜನ್ ಎಂದು ಹೇಳುವ ವಿದ್ಯಾರ್ಥಿಗಳು ಇಂದು ತಾವೇ ಪ್ರಯೋಗಗಳ ಮೂಲಕ ಪರೀಕ್ಷಿಸಿದರು. ಜತೆಗೆ ನೀರಿನ ಲಕ್ಷಣಗಳು, ಕುದಿಯುವ ಬಿಂದು ಕಂಡುಕೊಂಡರು. ಪ್ರಯೋಗಗಳು ವೈಜ್ಞಾನಿಕ ಸತ್ಯವನ್ನು ಪುಷ್ಠೀಕರಿಸಿ ಕಲಿಕೆಯನ್ನುಂಟು ಮಾಡಬಲ್ಲವು.

Saturday 14 November 2015

ಮಕ್ಕಳ ದಿನಾಚರಣೆ 2015

ಇಂದು ನಂಮ ಕೊಡಚಿ ಶಾಲೆಯಲ್ಲಿ ಮಕ್ಕಳ ದಿನ(ನೆಹರು ಜಯಂತಿ) ಆಚರಿಸಲಾಯಿತು. ವಿದ್ಯಾರ್ಥಿ ಪ್ರತಿನಿಧಿಗಳನ್ನು ಗೌರವಿಸಿ ಆಚರಣೆಯ ಮಹತ್ವವನ್ನು ತಿಳಿಸಲಾಯಿತು.
ವಿದ್ಯಾರ್ಥಿನಿ ಕು| ಅಮೃತಾ ಬಸವರಾಜ ಎಲ್ಲರನ್ನು ಸ್ವಾಗತಿಸಿದಳು. ನೆಹರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಕು| ಹಣಮಂತ ಜಗನ್ನಾಥ ನೆಹರು ಕುರಿತು ಮಾತನಾಡಿದ. ಮಕ್ಕಳಿಗೆ ಶುಭಾಶಯ ಕೋರಿ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.

Thursday 12 November 2015

'ರಾಷ್ಟ್ರೀಯ ಶಿಕ��ಷಣ ದಿನ' 11-11-2015

ಕೇಂದ್ರ ಶಿಕ್ಷಣ ಮಂತ್ರಿಗಳಾಗಿ ದೇಶದ ಶೈಕ್ಷಣಿಕ ರಂಗದಲ್ಲಿ ಮಹತ್ತರ ಬದಲಾವಣೆಯುಂಟು ಮಾಡಿದರು ಮೌಲಾನಾ ಅಬ್ದುಲ್ ಕಲಾಂ ಆಜಾದ್.
ಅವರ ಜನ್ಮದಿನ ಸ್ಮರಣಾರ್ಥ ದೇಶದೆಲ್ಲಡೆ ಈ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ.
ನಮ್ಮ ಕೊಡಚಿ ಶಾಲೆಯಲ್ಲಿ ಮೌಲಾನಾರ ಜನ್ಮದಿನ ಆಚರಿಸಿ ಅವರ ಸ್ವಾತಂತ್ರ ಹೋರಾಟದ ಬದುಕು ಹಾಗೂ ಶಿಕ್ಷಣದಲ್ಲಿ ಉಂಟು ಮಾಡಿದ ಅಭಿವೃದ್ಧಿಯನ್ನು ಸ್ಮರಿಸಲಾಯಿತು.ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳು ನಮನ ಸಲ್ಲಿಸಿದರು

ಟಿಪ್ಪು ಜಯಂತಿ 10-11-2015

ದಿ.10-11-2015ರಂದು ನಮ್ಮ ಕೊಡಚಿ ಶಾಲೆಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಯಿತು. ಮಂಜುನಾಥ ಶಿಕ್ಷಕರು ಎಲ್ಲರನ್ನು ಸ್ವಾಗತಿಸಿದರು. ಮುಖ್ಯಶಿಕ್ಷಕರಾದ ಹರಿಶ್ಚಂದ್ರ ಅವರು ಟಿಪ್ಪು ಭಾವಚಿತ್ರಕ್ಕೆ ಪುಷ್ಪವಂದನೆ ಸಲ್ಲಿಸಿದರು. ಇನ್ನೋರ್ವ ಶಿಕ್ಷಕರಾದ ಗೋಣೆಪ್ಪ ಅವರು ಟಿಪ್ಪುವಿನ ಶೌರ್ಯ, ದೇಶಪ್ರೇಮ ಕುರಿತು ಮಾತನಾಡಿದರು.ಸಚಿನ್ ಕುಮಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು,ಗ್ರಾಮದ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Thursday 29 October 2015

ಮಕ್ಕಳ ಹಕ್ಕು-ಧ್ಯೇಯ ಗೀತೆ

ಮಕ್ಕಳ ಹಕ್ಕು ಧ್ಯೇಯ ಗೀತೆಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ,
ಕೃಪೆ:ಯೂ ಟೂಬ್

https://m.youtube.com/watch?v=h_vyk1XEYVE&feature=youtu.be

Wednesday 7 October 2015

ಕಂಪ್ಯೂಟರ್ ಪರಿಚಯಾತ್ಮಕ ಪಾಠ

ಇಂದು ಮಧ್ಯಾಹ್ನದ ಅವಧಿಯಲ್ಲಿ 6 ಮತ್ತು 7ನೆಯ ತರಗತಿಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ನ ಅರ್ಥ,ಕಂಪ್ಯೂಟರ್ ಹಿನ್ನೆಲೆ ಪೀಳಿಗೆಗಳು,ಕಂಪ್ಯೂಟರ್ ನ ಭಾಗಗಳು ಮುಂತಾದವುಗಳನ್ನು ಪರಿಚಯ ಮಾಡಿಕೊಡಲಾಯಿತು.
ಬಳಿಕ ಕಂಪ್ಯೂಟರ್ ಆನ್ ಆಫ್ ಹಾಗೂ ವರ್ಡ್ ಪ್ಯಾಡ್ ಪರಿಚಯಿಸಿ ಅಭ್ಯಾಸ ಮಾಡಿಸಲಾಯಿತು. ಮೊದಲ ಬಾರಿ ಕಂಪ್ಯೂಟರ್ ಮುಂದೆ ಕುಳಿತ ಚಿಣ್ಣರ ಖುಷಿ ಮೊದಲ ಮಳೆಯಲ್ಲಿ ನೆನದಂತಿತ್ತು.

Thursday 1 October 2015

ಕಂಪ್ಯೂಟರ್ ಲ್ಯಾಬ್ : ಇಂದಿನಿಂದ ಶುರು

ಎರಡು ವರ್ಷಗಳಿಂದ ಕನಸಾಗಿದ್ದ ಕಂಪ್ಯೂಟರ್ ಲ್ಯಾಬ್ ನನಸಾಗಿದ್ದು ಜುಲೈ 31,2015ರಂದು. ನಮ್ಮ ಮನವಿಗೆ ಸ್ಪಂದಿಸಿದ ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್ ನಮ್ಮ ಕೊಡಚಿ ಶಾಲೆಗೆ 3 ಕಂಪ್ಯೂಟರ್ಗಳನ್ನು ನೀಡಿತು. ಇಂದು ಶಾಲೆಯಲ್ಲಿ ಅಧಿಕೃತವಾಗಿ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ನ್ನು ಉದ್ಘಾಟಿಸಲಾಯಿತು. ಮುಂದಿನ ಸೆಮ್ ದಿಂದ ಕಂ ಕಲಿಕೆ ಶುರು. ಸಂತಸದ ಕ್ಷಣಗಳ ಒಂದೆರಟು ಸ್ನಾಪ್ಸ್ ನೋಡಿ

Saturday 5 September 2015

ಹನಿಗವನಗಳಲ್ಲಿ ರಕ್ಷಾಬಂಧನ

ಮೊನ್ನೆ ಮುಗಿದ ರಕ್ಷಾಬಂಧನ ಇನ್ನೂ ಕಾಡುತ್ತಿದೆ. ಕಾರಣ ಅಂದ ಆರು ಮತ್ತು ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆ ರಕ್ಷಾಬಂಧನದ ಕುರಿತು ಹನಿಗವಿತೆಯ ಥರ ಬರೀರಿ ಅಂತ ಹೇಳಿದ್ದೆ. ಎದುರಿಗಿದ್ದ ಕನ್ನಮಂಗಲ ಸ.ಹಿ.ಪ್ರಾ.ಶಾಲೆಯ ಶಾಮಂತಿ4 ನ್ನು ಮೊದಲೇ ಪರಿಚಯಿಸಿದ್ದೆ. ಹೀಗಾಗಿ ಹಿಗ್ಗಿನಿಂದಲೇ ಚಿಣ್ಣರು ಹನಿಗವಿತೆ ಬರೆದ್ರು. ಆಯ್ದ ನಾಲ್ಕು ಕವಿತೆಗಳ ಫೋಟೊ. ಹೇಗಿವೆ ಅಂತ ನೀವೇ ಹೇಳಿ

Saturday 29 August 2015

ಆಮ್ಲಗಳ ಜತೆಗೊಂದಾಟ

"ಆಮ್ಲಗಳೆಂದರೆ ಗೊತ್ತಾ?"

"ಇಲ್ಲ ಸರ್"

"ಆಸಿಡ್ಸ್ ಅಂದ್ರೆ ಗೊತ್ತಾ?"

"ಗೊತ್ತು ಸರ್, ಅದೇ ಮೈ ಮೇಲೆ ಬಿದ್ರೆ ಸುಡುತ್ತದಲ್ಲ"

"ಹೌದು, ಅದೇ. ಆದ್ರೆ ಎಲ್ಲವೂ ಸುಡೋದಿಲ್ಲ"

ಹೀಗೆ ಮಾತಾಡುತ್ತ ಆಮ್ಲಗಳ ಬಗ್ಗೆ ಚರ್ಚಿಸುತ್ತಾ ನಡೆಯಿತು ನಂ ಪಾಠ. ಆಮ್ಲಗಳು ಲೋಹಗಳೊಂದಿಗೆ ಹೇಗೆ ವರ್ತಿಸುತ್ತವೆ ಎಂಬ ಪ್ರಯೋಗ ಮಾಡಿ ತೋರಿಸಿದಾಗ ವಿದ್ಯಾರ್ಥಿಗಳ ಆನಂದಕ್ಕೆ ಪಾರವೇ ಇರಲಿಲ್ಲ.
ಆಮ್ಲ+ಲೋಹ-->ಲವಣ+ಜಲಜನಕ

ಎಂಬ ರಾಸಾಯನಿಕ ಸಮೀಕರಣ ಸರಾಗವಾಗಿ ಹೇಳ್ತಾರೆ.

Wednesday 19 August 2015

Computer Lab; A Dream came true

I was very voracious to teach my students with computers. That is called as Computer Assisted Learning(CAL). 3years back We teachers thought of this idea. But it was highly impossible to villagers to donate such huge amount. But I asked INFOSYS foundation to pour its water to our dream plant. It agreed and made our dream true. The INFOSYS foundation donated 3computers on 31/7/2015. So we all teachers on behalf of all students and villagers thank the INFOSYS foundation.
Now we are making computer lab with all equipments so that all the students will be instructed with computers and also learn computer.
Dreaming good things will come true one or another day.What do you say?

Monday 17 August 2015

Celebration of 69th Independence day

This 69th Independence day was celebrated in Govt Higher Primary School Kodachi. Tq-Jewargi, Dist-Kalaburagi. Headmaster Mr.Harishchandra hoisted the national flag and all saluted with national anthem.
Few of our students delivered speech, cultural programmes were performed.
After that prizes sponcered bu Gram Panchayat Yalwar were distributed.
Then a heavy discussion on school needs began. All leaders of village,gram panchayat members said that they would get school playground for students as soon as possible.
Afterwards sweet and snacks were given

Friday 7 August 2015

ಹೀಗಿದೆ ನಮ್ಮ '' ಶಾಲಾ ಗ್ರಂಥಾಲಯ

ಶಾಲೆಗೊಂದು ಗ್ರಂಥಾಲಯ ಇದೆ ಆದರೆ ಅದು ವಿದ್ಯಾರ್ಥಿಗಳಿಗಾಗಿ ತೆರೆದಿರಲ್ಲ ಎಂಬ
ಅಪಸ್ವರ ಇದೆ. ಆದರೆ ನಮ್ಮ ಕೊಡಚಿ ಶಾಲೆಯಲ್ಲಿ ಹಾಗಿಲ್ಲ. ವಿದ್ಯಾರ್ಥಿಗಳು
ತಮಗ್ಯಾವುದಿಷ್ಟವೋ ಆ ಪುಸ್ತಕಗಳನ್ನು ಆರಿಸಿ ವಿತರಣಾ ವಹಿಯಲ್ಲಿ ನಮೂದಿಸಿ
ಪಡೆಯುತ್ತಾರೆ. ಒಂದುವಾರದ ಬಳಿಕ ಪುಸ್ತಕದ ಜತೆಗೆ ಅದರ ವಿಮರ್ಶೆ,ಇಷ್ಟವಾದ ಭಾಗ ಅಥವಾ
ಕೆಲವೊಮ್ಮೆ ಚಿತ್ರಗಳನ್ನೂ ಬರೆಯುತ್ತಾರೆ. ಅದಕ್ಕೂ ಮೊದಲು ಪ್ರತಿ ಬುಧವಾರ
ತರಗತಿಗೊಂದರಂತೆ ವಿಶಿಷ್ಟವಾದ ಕೃತಿಗಳನ್ನು ಪರಿಚಯಿಸಿ ಅದರ ಲೇಖಕರ ಕುರಿತು ಮಾಹಿತಿ
ನೀಡಲಾಗುತ್ತದೆ. ಶಿಕ್ಷಕರ ಅನುಪಸ್ಥಿತಿಯಲ್ಲಿ ವಿದ್ಯಾರ್ಥಿಗಳೇ ಗ್ರಂಥಾಲಯ ವಹಿ
ನಿರ್ವಹಿಸುತ್ತಾರೆ. ತರಗತಿ ಕೋಣೆಯಲ್ಲೂ ಸಹ ವಾಚನಾಲಯ ಮೂಲೆ ರಚಿಸಿ ಬಾಲ
ವಿಜ್ಞಾನ,ಶಿಕ್ಷಣ ಶಿಲ್ಪಿ, ವಿಜಯವಾಣಿ ಮುಂತಾದ ಪತ್ರಿಕೆಗಳನ್ನು ಇಡಲಾಗಿದೆ. ಬಿಡುವಿನ
ವೇಳೆಯಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ,
ಸ್ದಳದ ಅಭಾವವಿದ್ದರೂ ತಕ್ಕಮಟ್ಟಿಗೆಗ್ರಂಥಾಲಯ ನಮ್ಮ ಕೊಡಚಿ ಶಾಲೆಯಲ್ಲಿ ಸಜೀವವಾಗಿದೆ

ಕಲಿಕೆಯ ಭಾಗವಾಗಿ ಪರಿಸರ ಶಿಕ್ಷಣ

ಸುಮಾರು ಎರಡು ವರ್ಷಗಳ ಹಿಂದೆ ನಮ್ಮ ಕೊಡಚಿ ಶಾಲೆಯಲ್ಲಿ ಒಂದೇ ಒಂದು ಸಸಿ ಇರಲಿಲ್ಲ. ಸೂಕ್ತ ಕಾಂಪೌಂಡ್ ಹಾಗೂ ಸರಿಯಾದ ವ್ಯವಸ್ಥೆ ಇರದ ಕಾರಣ ಶಾಲಾ ವಾತಾವರಣವನ್ನು ಪರಿಸರ ಸ್ನೇಹಿಯನ್ನಾಗಿ ಮಾಡುವುದು ಕನಸಿನ ಮಾತಾಗಿತ್ತು. ಆದರೆ ಛಲ ಬಿಡದೆ ಸಹೋದ್ಯೋಗಿಯಾದ ಶ್ರೀ ಗೋಣೆಪ್ಪ ಅವರು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಸುಮಾರು70ವಿವಿಧ ಬಗೆಯ ಸಸಿಗಳನ್ನುಅರಣ್ಯ ಇಲಾಖೆಯಿಂದ ಪಡೆದು ಇದ್ದ ಸ್ವಲ್ಪ ಶಾಲಾವರಣದಲ್ಲಿಯೇ ನೆಟ್ಟರು. ಈಗ ಅವುಗಳಿಗೆ ಎರಡರ ಪ್ರಾಯ.

Thursday 6 August 2015

ಶಾಲಾ ಸಂಸತ್ತು ; ಒಂದು ಪ್ರಜಾತಾಂತ್ರಿಕ ಅರಿವ

"ಇಂದಿನ ಪ್ರಜೆಗಳೇ ನಾಳಿನ ನಾಗರಿಕರು"
ಎಂಬ ಮಾತಿನಂತೆ 2015-16ನೆಯ ಶೈಕ್ಷಣಿಕ ವರ್ಷದಾರಂಭದಲ್ಲಿ ಒಂದು ಉತ್ತಮ ಶಾಲಾಡಳಿತ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾತಂತ್ರ ಅರಿವು ಮೂಡಿಸಲು ದಿ6/6/2015 ರಂದು ನಮ್ಮ ಕೊಡಚಿ ಶಾಲೆಯಲ್ಲಿ ಶಾಲಾ ಸಂಸತ್ತು ರಚಿಸಲಾಯಿತು. ವಿವಿಧ ತರಗತಿಯಿಂದ ಅನೇಕ ಖಾತೆಗಳಿಗನುಸಾರ ಒಟ್ಟು 30 ವಿದ್ಯಾರ್ಥಿ ಉಮೇದುವಾರಗಳಲ್ಲಿ 16ವಿದ್ಯಾರ್ಥಿಗಳು ಜಯಶಾಲಿಯಾದರು. ಒಟ್ಟು 110ವಿದ್ಯಾರ್ಥಿಗಳು ಮತ ಚಲಾಯಿಸಿದರು.

Monday 22 June 2015

ರೆಡಿ ಸ್ಟೆಡಿ ಗೋ...

ನಂ ಶಾಲೆಗೆ ಆಟದ ಮೈದಾನ ಇಲ್ಲದ ಕೊರಗು ಹಲವು ವರ್ಷಗಳಿಂದಲೂ ಇತ್ತು. ಇಂದು ಎಲ್ಲ ವಿದ್ಯಾರ್ಥಿಗಳೊಡಗೂಡಿ ಶಿಕ್ಷಕರಾದ ಗೋಣೆಪ್ಪ, ಗುರುಲಿಂಗಯ್ಯ ಹಾಗೂ ನಾನು ಶಾಲೆಯಿಂದ ಅನತಿ ದೂರದಲ್ಲಿದ್ದ ಸರ್ಕಾರಿ ಜಾಗೆಯಲ್ಲಿನ ಮುಳ್ಳು ಪೊದೆಗಳನ್ನು ಕಡಿದು ಹಾಕಿದೆವು.ಹಳೆಯ ವಿದ್ಯಾರ್ಥಿಗಳೂ ಕೈ ಜೋಡಿಸಿದರು. ಅದೃಷ್ಟವೆಂಬಂತೆ ಬಸವರಾಜ ಪೂಜಾರಿಯ ಟ್ರ್ಯಾಕ್ಟರ್ ನಿಂದ ಸಮತಟ್ಟು ಮಾಡಲಾಯಿತು. ಒಂದುಗಂಟೆಯಲ್ಲಿ ಗ್ರೌಂಡ್ ರೆಡಿಯಾಯಿತು. ನಾಳೆಯಿಂದ ರೆಡಿ ಸ್ಟೆಡಿ ಗೋ.

ನಂ ಶಾಲೆಗ್ ಗ್ರೌ��ಡ್ ಬಂತು...

ಇಂದು ಅದೇನು ಹುಮ್ಮಸ್ಸೋ ಏನೋ ಸುಮಾರು ವರ್ಷಗಳಿಂದ ನಂ ಕೊಡಚಿ ಶಾಲೆಗೆ ಆಟದ ಮೈದಾನ ಇಲ್ಲ ಎಂಬ ಕೊರಗು ನೀಗಿಸಲೇ ಬೇಕು ಅಂತ ನಂ ಸಹೋದ್ಯೋಗಿ ಶಿಕ್ಷಕರಾದ ಶ್ರೀ ಗೋಣೆಪ್ಪ ಹಾಗೂ ಶ್ರೀ ಗುರುಲಿಂಗಯ್ಯ ಅವರು ತಯಾರಾದ್ರು. ನನ್ನ ಜೊತೆ ಚರ್ಚಿಸಿ ತಮ್ಮ ಯೋಜನೇನ ಹೇಳಿದ್ರು. ನನಗೂ ಅದು ಸರಿಯೆನಿಸಿತು.ಅಪರಾಹ್ನ ಊಟ ಮುಗಿಸಿ 1:45ಕ್ಕೆ ಎಲ್ಲ ವಿದ್ಯಾರ್ಥಿಗಳ ಜೊತೆ ಸರ್ಕಾರಿ ಜಾಗೆಯಲ್ಲಿದ್ದ ಮುಳ್ಳು ಕಂಟಿ,ಕಲ್ಲು ತೆರವುಗೊಳಿಸಿದೆವು. ಛಲವಿದ್ದರೆ ಎಲ್ಲವೂ ಸಾಧ್ಯ.

INTERNATION YOGA DAY in Our Kodachi School

'ಯೋಗಃ ಚಿತ್ತವೃತ್ತಿ ನಿರೋಧಃ'

On 21June 2015 our school ground is full of students. We all teachers and students were voracious about Yoga. Though Yoga Is part of our curriculum, is not being practiced due to some reasons. But we realised that doing yoga daily helps us to rejuvenate and get rid of stress and adversity. Mr. Goneppa,Mr Gurulingaiah and Mr. Sachinkumar gave explanation and did simple Yogasanas and pupils followed them.

Wednesday 3 June 2015

2015-2016ನೆಯ ಶಾಲಾ ಪ್ರಾರಂಭೋತ್ಸವ

ಇಂದು ದಿ.30/05/2015ರಂದು ನಮ್ಮ ಕೊಡಚಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ
ಕಾರ್ಯಕ್ರಮವನ್ನು ಆಚರಿಸಲಾಯಿತು.ಬೆಳಗ್ಗೆ 7.45ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ
ಶಿಕ್ಷಕರು,ಎಸ್ಡಿಎಂಸಿ ಸದಸ್ಯರು ಸೇರಿ ವಿದ್ಯಾರ್ಥಿಗಳ ಜೊತೆ ಪಥಸಂಚಲನ ನಡೆಸಲಾಯಿತು.
ಬಳಿಕ ಗ್ರಾಮದ ಗಣ್ಯರ, ಎಸ್ಡಿಎಂಸಿ ಸದಸ್ಯರ ಸಮ್ಮುಖದಲ್ಲಿ ಹಾಜರಿದ್ದ ಎಲ್ಲ
ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು.
ಬಳಿಕ ಎಲ್ಲರಿಗೂ ಸಿಹಿ ಹಂಚಲಾಯಿತು.

Monday 26 January 2015

66ನೆಯ ಗಣತಂತ್ರ ದಿನಾಚರಣೆ

ಇಂದು 66ನೆಯ ಗಣತಂತ್ರ ದಿನವನ್ನು ನಮ್ಮ ಕೊಡಚಿ ಶಾಲೆಯಲ್ಲಿ ಆಚರಿಸಲಾಯಿತು. ಮುಖ್ಯಗುರುಗಳಾದ ಶ್ರೀ ಹರಿಶ್ಚಂದ್ರ ಧ್ವಜಾರೋಹಣ ನೆರವೇರಿಸಿದರು. ಗ್ರಾಮದ ಕನಕದಾಸ ಗ್ರಾಮೀಣ ಯುವ ಬಳಗ ಮಕ್ಕಳಿಗೆ ನೋಟ್ ಪುಸ್ತಕ ಪೆನ್ನು ವಿತರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು

Thursday 22 January 2015

ಸಿಂಚನ ; ಒಂದು ವಿನೂತನ ತರಬೇತಿ

ಹಿರಿಯ ಪ್ರಾಥಮಿಕ ಶಾಲೆಯ 6 ರಿಂದ 8 ನೆಯ ತರಗತಿಗಳ ಗಣಿತ ಬೋಧಿಸುವ ಶಿಕ್ಷಕರಿಗೆ ಐದು
ದಿನಗಳ ತರಬೇತಿ ಜೇವರ್ಗಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಿಂಚನ ತರಬೇತಿ
ನಡೆಯಿತು. ತರಬೇತಿಯಲ್ಲಿ ಗಣಿತ ವಿಷಯದಲ್ಲಿನ ಪರಿಕಲ್ಪನೆಗಳನ್ನು ವಿಶಿಷ್ಟ ರೀತಿಯಲ್ಲಿ
ತಿಳಿಸಲಾಯಿತು. ಯಾವುದೇ ಬೀಜಾಕ್ಷರದ ಘಾತ ಸೊನ್ನೆ ಇದ್ದಾಗ ಬೆಲೆ ಒಂದು ಹೇಗೆ?
ಎಂಬುದನ್ನು ಬೇರೆ ಬೇರೆ ವಿಧಾನಗಳಿಂದ ತಿಳಿಸಿದರು. ಗಣಿತ ವಿಷಯದಲ್ಲಿ ಪಾಠ ಯೋಜನೆ,
ಅದರ ವ್ಯಾಪ್ತಿ, ತೊಟಡಗಿಸಿಕೊಳ್ಳುವಿಕೆ, ಶೋಧಿಸುವಿಕೆ, ಅಭಿವ್ಯಕ್ತಿಸುವಿಕೆ,
ಅನ್ವಯಿಸುವಿಕೆ,ಮೌಲ್ಯಮಾಪನ ಹೀಗೆ ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕೆಂದು ಸಂಪನ್ಮೂಲ
ವ್ಯಕ್ತಿಗಳು ವಿಶಿಷ್ಟವಾಗಿ ವಿವರಿಸಿದರು.
ಶಿಬಿರಾರ್ಥಿಗಳನ್ನು ತಂಡಗಳಾಗಿ ಮಾಡಿ ಪ್ರತಿ ತಂಡಕ್ಕೂ ಒಂದು ಘಟಕ ನೀಡಿ ಪಾಠ ಮಂಡನೆ
ಮಾಡಲು ತಿಳಿಸಲಾಯಿತು. ಎಲ್ಲ ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡಿದ್ದು
ವಿಶೇಷವಾಗಿತ್ತು.

Wednesday 21 January 2015

ಶಕ್ತಿ ; ತರಗತಿಯಲ್ಲೊಂದಿಷ್ಟು...

ಅಂದು ತರಗತಿಯಲ್ಲಿ ತೀರಾ ಗದ್ದಲ. ನನ್ನ ಕೈಯಲ್ಲಿದ್ದ ಕೋಲು ಹಾಗೂ ಕ್ಯಾರಿ ಬ್ಯಾಗ್
ನೋಡಿ ವಿದ್ಯಾರ್ಥಿಗಳು ಕ್ಷಣ ಕಾಲ ಭಯಭೀತರಾದರು. ಹೋಂ ವರ್ಕ್ ಮಾಡದವರಿಗೆ ಇದೆ ಹಬ್ಬ
ಅಂತ ಅವರು ತಿಳಿದರೇನೋ? ಒಟ್ಟಿನಲ್ಲಿ ತರಗತಿ ನಿಶ್ಶಬ್ದವಾಯಿತು. ಎಲ್ಲರಿಗೂ ಹಾಯ್
ಹೇಳಿ ನಾನು ತಂದಿದ್ದ ಕೋಲನ್ನು ಒಬ್ಬ ವಿದ್ಯಾರ್ಥಿಗೆ ಮುರಿಯಲು ತಿಳಿಸಿದೆ.ಆತ
ತನ್ನೆಲ್ಲ ಶಕ್ತಿ ಹಾಕಿ ಆ ಕೋಲನ್ನ ಮುರಿದೇಬಿಟ್ಟ,
ಮುಂದೆ ನಾನು ತಂದಿದ್ದ ಕ್ಯಾರಿ ಬ್ಯಾಗ್ ನಿಂದ ಒಂದು ನೀರು ತುಂಬಿದ ವಾಟರ್ ಬಾಟಲ್
ತೆಗೆದು ತರಗತಿ ಎದುರಿನ ಮಣ್ಣಿಗೆ ಎರಚಿದೆ, ಹೀಗೆ ವಿವಿಧ ಶಕ್ತಿಯ ರೂಪಗಳನ್ನು ಸರಳ
ಚಟುವಟಿಕೆಗಳ ಮೂಲಕ ಅನುಗಮನ ವಿಧಾನದಿಂದ ಪರಿಚಯಿಸುತ್ತ ಹೋದೆ. ನನ್ನ
ವಿದ್ಯಾರ್ಥಿಗಳಿಗೆ ನಾನು ಕಲಿಸಿದೆ ಎನ್ನುವುದಕ್ಕಿಂತ ಅವರೇ ಪೂರಕವಾಗಿ ಕಲಿಯುತ್ತಾ
ಹೋದರು. ಪ್ಯಾಯೋಗಿಕ ಬೋಧನೆಯೊಂದಿಗೆ ಪ್ರಾತ್ಯಕ್ಷಿಕೆ ನೀಡಿದರೆ ಸುಳಿದ ಬಾಳೆಹಣ್ಣಂತೆ
ಎಲ್ಲವನ್ನೂ ಚಿಣ್ಣರು ಕಲಿಯಬಲ್ಲರು

Saturday 10 January 2015

ನೋಡಿ ತಿಳಿ : ಮಾಡಿ ಕಲಿ

ಅಂದು ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆ ಬೆಳಕು ಪಾಠದಲ್ಲಿ ಬರುವ ಪೀನ ಮಸೂರದಲ್ಲಿನ ಲಕ್ಷಣಗಳನ್ನು ತಿಳಿಸಿದ ಮೇಲೆ ಕೆಲವು ವಿದ್ಯಾರ್ಥಿಗಳು ತಾವೂ ಸ್ವತಃ ಪ್ರಯೋಗ ಮಾಡಿ ನೋಡುತ್ತೇವೆಂದರು. ಪ್ರಯೋಗ ಸಂಪೂರ್ಣ ಅವರಿಂದಲೇ ನಡೆಯಿತು, ಅವರ ಖುಷಿ ಹೇಳತೀರದು

ಬೆಳಕು: ಪ್ರಾಯೋಗ��ಕ ಕಲಿಕೆ

7ನೆಯ ತರಗತಿ ವಿಜ್ಞಾನ ಬೋಧನೆಯಲ್ಲಿ ಪೀನ ಮಸೂರದಲ್ಲಿ ಉಂಟಾಗುವ ಪ್ರತಿಬಿಂಬದ ಲಕ್ಷಣಗಳನ್ನು ಪ್ರಯೋಗದ ಮೂಲಕ ತಿಳಿಸಲಾಯಿತು