Saturday 6 September 2014

ಮೋದಿ ಮಾತು...(ಶಿಕ್ಷಕರ ದಿನ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ)

ದಿ.05-09-2014ರಂದು ಸರರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಚಿಯಲ್ಲಿ ಶಿಕ್ಷಕರ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳೇ ಕಾರ್ಯಕ್ರಮವನ್ನು ಆಯೋಜಿಸಿ ತಮ್ಮ ಮೆಚ್ಚಿನ ಶಿಕ್ಷಕರಿಗೆ ಕಾಣಿಕೆಗಳನ್ನು ಸಲ್ಲಿಸುವುದರ ಮೂಲಕ ಗೌರವ ಸೂಚಿಸಿದರು. ಎಲ್ಲಾ ತರಗತಿಯ ವಿದ್ಯಾರ್ಥಿಗಳು ಹಾಜರಿದ್ದು ಶಿಕ್ಷಕರ ದಿನದ ಅಂಗವಾಗಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಹಾಗೂ ಅವರ ಉದಾತ್ತ ಗುಣಗಳನ್ನು ಹಂಚಿಕೊಳ್ಳುವುದರ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಎಲ್ಲ ವಿದ್ಯಾರ್ಥಿಗಳು ರುಚಿಯಾದ ಪಾಯಸ ಸವಿದು ತರಗತಿಗಳಿಗೆ ತೆರಳಿದರು.

           ಮಧ್ಯಾಹ್ನ ಸರಿಯಾಗಿ 3.00 ಗಂಟೆಗೆ ಪ್ರಧಾನ ಮಂತ್ರಿಯವರ ವಿದ್ಯಾರ್ಥಿಗಳೊಂದಿಗಿನ ನೇರ ಸಂವಾದವನ್ನು ಎಲ್ಲಾ ಸಹಶಿಕ್ಷಕರು SDMC ಸದಸ್ಯರು, ಗ್ರಾಮದ ಪಾಲಕರು ಹಾಗೂ ವಿದ್ಯಾರ್ಥಿಗಳೊಂದಿಗೆ ವೀಕ್ಷಿಸಲಾಯಿತು.















ಇಜೇರಿ ವಲಯದ ಪ್ರತಿಭಾ ಕಾರಂಜಿ 04-09-2014

ದಿ.04-09-2014ರಂದು ಇಜೇರಿ ವಲಯದ ಪ್ರತಿಭಾ ಕಾರಂಜಿಯು ಚಿಗರಳ್ಳಿ ಕ್ಯಾಂಪ್ ನ ರಾಜೀವ ಗಾಂಧಿ ಪ್ರೌಢ ಶಾಲೆಯಲ್ಲಿ ಜರುಗಿತು. ತಾ.ಪಂ ಅದ್ಯಕ್ಷರಾದ ಶ್ರೀ ಅಮೀರ್ ಹಮ್ಜಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು. ತಾ. ಪಂ ಸದಸ್ಯರಾದ ಶ್ರೀ ಹರಿಶಚಂದ್ರ ನಾಯಕ, ಮೈಬೂಬ ಅಲಿ, ತಾ.ಶಿ.ಸಂ ದ ಕಾರ್ಯದರ್ಶಿಯಾದ ಶ್ರೀ ಮರೆಪ್ಪ ಮೂಲಿಮನಿ, ಎನ್.ಜಿ.ಒ ದ ಕಾರ್ಯದರ್ಶಿಯಾದ ಶ್ರೀ ಗುಡುಲಾಲ್ ಶೇಖ, ರಾ.ಶಿ.ಸಂ ಯ ಅದ್ಯಕ್ಷರಾದ ಶ್ರೀ ಶರಣಪ್ಪ ಬಡಿಗೇರ ಹಾಗೂ ವಲಯದ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.








Monday 1 September 2014

ಪ್ರತಿಭಾ ಕಾರಂಜಿ ;

ಚಿಣ್ಣರ ಪ್ರತಿಭೆಗೆ ಕನ್ನಡಿ ಎಂಬಂತೆ.ಶುರುವಾದ ಪ್ರತಿಭಾ ಕಾರಂಜಿ 2002-03ರಲ್ಲಿ ರಾಜ್ಯಾದ್ಯಂತ ಪ್ರಾರಂಭವಾಯಿತು. 2014-15ನೆಯ ಸಾಲಿನ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ನಮ್ಮ ಶಾಲೆಯಲ್ಇ ದಿ.18.08.2014 ರಂದು ನಡೆಯಿತು. ಕಾರ್ಯಕ್ರಮದ ಆಧ್ಯಕ್ಶಊತೆಯನ್ನು ಶಾಲಾ ಮುಖ್ಯಗುರುಗಲಾದ ಶ್ರೀ ಹರಿಶ್ಚಂದ್ರ ಇವರು ವಹಿಸಿಕೊಂಡಿದ್ದರು. ಗ್ರಾಮದ ಗಣ್ಯರಾದ ಶ್ರೀ ಮಾನಪ್ಪ ಪೂಜಾರಿ ಅ
ರು ಮುಖ್ಯ ಅತಿಥಿಯಾಗೆದ್ದರು. ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗದಲ್ಲಿ.ಸ್ಫರ್ಧೆ ನಡೆದವು. ವಿಜೀತರಿಗೆ ವಿವಿಧ ಪ್ರೋತ್ಸಾಹಕವನ್ನು ನೀಡಿ ಕಾರ್ಯಕ್ರಮಕ್ಕೆ ಮಂಗಲ ಹಾಡಲಾಯಿತು.