Saturday, 20 August 2011

ಮೀನಾ : ಮತ್ತಷ್ಟು ಹೊಸ ಹೆಜ್ಜೆಗಳು.


             2011-12£Éà ¸Á°£À «ÄãÁ vÀAqÀzÀ «zÁåyðUÀ¼À ¥Àಟ್ಟಿ
PÀæ.¸ÀA
zÁR¯Áw ¸ÀA.
«zÁåyðUÀ¼À ºÉ¸ÀgÀÄ
vÀgÀUÀw
eÁw
d£Àä ¢£ÁAPÀ
°AUÀ
1.
163
¥ÀAZÀ²Ã¯Á/gÁAiÀÄ¥Àà
5£ÉÃ
¥À.eÁ
03/03/2001
ºÉtÄÚ
2.
159
ªÀÄgɪÀÄä/©üêÀÄgÁAiÀÄ
5£ÉÃ
¥À.eÁ
08/10/2000
ºÉtÄÚ
3.
176
¨sÁUÀªÀÄä/ ªÀiÁ£À¥Àà
5£ÉÃ
¥À.¥ÀA
03/07/2001
ºÉtÄÚ
4.
170
¹zÀݪÀÄä.ªÀÄ®è£ÀUËqÀ
5£ÉÃ
EvÀgÉ
04/08/2001
ºÉtÄÚ
5.
258
AiÀiÁ¸À«Ä£ï /gÀ»ªÀiÁ£ï¸Á¨
5£ÉÃ
ªÀÄĹèA
12/06/2001
ºÉtÄÚ
6.
167
ªÀÄ®è¥Àà/¤AUÀ¥Àà
5£ÉÃ
¥À.eÁ
21/05/2000
UÀAqÀÄ
7.
175
£ÁgÁAiÀÄt/w¥ÀàtÚ
5£ÉÃ
¥ÀæªÀUÀð-1
11/04/2000
UÀAqÀÄ
8.
131
w¥ÀàªÀÄä/¹zÀÝ¥Àà
6£ÉÃ
¥À.eÁ
13/05/2000
ºÉtÄÚ
9.
123
¸ÀĪÀÄ/ZÀAzÀæAiÀÄå
6£ÉÃ
EvÀgÉ
09/02/2000
ºÉtÄÚ
10.
138
¸ÀÄzsÁ/§¸ÀªÀgÁd
6£ÉÃ
EvÀgÉ
01/03/2000
ºÉtÄÚ
11.
122
±ÁAvÀªÀÄä/¨Á¥ÀÄUËqÀ
6£ÉÃ
EvÀgÉ
20/07/2000
ºÉtÄÚ
12.
119
ªÀĺÁ£ÀAzÀ/¸ÀAUÀtÚ*
6£ÉÃ
EvÀgÉ
25/08/2000
ºÉtÄÚ
13.
132
©üêÀÄtÚ/PÀȵÀÚ¥Àà
6£ÉÃ
¥ÀæªÀUÀð-1
25/06/2000
UÀAqÀÄ
14.
094
¸Ë¨sÁUÀå/gÁAiÀÄ¥Àà
7£ÉÃ
¥À.eÁ
12/06/1999
ºÉtÄÚ
15.
111
¦æAiÀiÁAPÀ/ªÀÄ®è¥Àà
7£ÉÃ
EvÀgÉ
05/04/1999
ºÉtÄÚ
16.
087
gÉÃtÄPÁ/ªÀiÁ£À¥Àà
7£ÉÃ
¥À.¥ÀA
03/05/1999
ºÉtÄÚ
17.
318
±ÁAvÀªÀÄä/¸ÀĨsÁ±ÀÑAzÀæ**
7£ÉÃ
EvÀgÉ
01/06/1999
ºÉtÄÚ
18.
084
¹zÀݪÀÄä/gÀÄzÀæUËqÀ
7£ÉÃ
EvÀgÉ
06/05/1999
ºÉtÄÚ
19.
105
ªÀÄÄzÀÄPÀ¥Àà/©üêÀÄgÁAiÀÄ
7£ÉÃ
¥À.eÁ
06/03/1999
UÀAqÀÄ
20.
091
±ÀA¨sÀİAUÀ/«oÉÆÃ¨Á
7£ÉÃ
EvÀgÉ
06/04/1999
UÀAqÀÄ

*G¥À£ÁAiÀÄQ       ** £ÁAiÀÄQ      «ÄãÁ vÀAqÀzÀ ¥ÉæÃgÀPÀ ²PÀëPÀ/Q : ²æÃ ¸Àa£ïPÀĪÀiÁgÀ ©.»gÉêÀÄoÀ
«ÄãÁ vÀAqÀzÀ ªÀÄÄRå ²PÀëPÀgÀÄ : ²æÃ ºÀj±ÀÑAzÀæ £ÁAiÀÄPï
             2011-12 £Éà ¸Á°£À dįÉÊ wAUÀ¼À «ÄãÁ vÀAqÀzÀ PÁAiÀÄðZÀlĪÀnPÉUÀ¼ÀÄ

·        ¢. 11-07-2011, ¸ÉÆÃªÀĪÁgÀzÀAzÀÄ ¨É½UÉÎ 9.00 ¬ÄAzÀ 9.30gÀªÀgÉUÉ ±Á¯Á CªÀ¢üAiÀÄ ªÀÄÄ£Àß zÁR¯Áw DAzÉÆÃ®£À PÁAiÀÄðPÀæªÀĪÀ£ÀÄß «ÄãÁ vÀAqÀzÀªÀgÉÆA¢UÉ ºÀ«ÄäPÉÆ¼Àî¯ÁVvÀÄÛ. vÀAqÀzÀ G¥À£ÁAiÀÄQ PÀĪÀiÁj ªÀĺÁ£ÀAzÀ vÀAqÀzÀ ¸ÀzÀ¸Àå «zÁåyðUÀ¼ÉÆA¢UÉ ¥ÀxÀ ¸ÀAZÀ®£À £ÀqɹzÀ¼ÀÄ. ±Á¯ÉUÉ UÉÊgÀÄ ºÁdgÁzÀ «zÁåyðUÀ¼À ªÀÄ£ÉUÉ ¨sÉÃn ¤Ãr ªÀÄ£ÀªÉǰ¸À¯Á¬ÄvÀÄ.
·        ¢. 16-07-2011, ±À¤ªÁgÀzÀAzÀÄ 2011-12£Éà ¸Á°£À ¥ÀæxÀªÀÄ «ÄãÁ ¸À¨sÉAiÀÄ£ÀÄß DAiÉÆÃf¸À¯ÁVvÀÄÛ. ¸À¨sÉAAiÀİè J¯Áè ¸ÀzÀ¸Àå «zÁåyðUÀ¼ÀÄ, ¥ÉæÃgÀPÀ ²PÀëPÀgÀÄ, ªÀÄÄSÉÆåÃ¥ÁzsÁåAiÀÄgÀÄ ¨sÁUÀªÀ»¹zÀÝgÀÄ. ¸À¨sÉAiÀÄ°è «ÄãÁ ZÀlĪÀnPÉUÀ¼À ªÀ» ºÁUÀÆ «ÄãÁ qÉÊjAiÀÄ£ÀÄß ¤ªÀð»¸ÀĪÀ PÀÄjvÀÄ ZÀað¸À¯Á¬ÄvÀÄ.
·        ¢. 23-07-2011, ±À¤ªÁgÀzÀAzÀÄ «ÄãÁ ¸À¨sÉAiÀÄ°è «ÄãÁ vÀAqÀzÀ ¥ÉæÃgÀPÀ ²PÀëPÀgÁzÀ ²æÃ ¸Àa£ïPÀĪÀiÁgÀ »gÉêÀÄoÀ CªÀgÀÄ «ÄãÁ ªÀåQÛvÀéªÀ£ÀÄß, «ÄãÁ ¥ÀvÀæªÀ£ÀÄß «ÄãÁ vÀAqÀzÀ ZÀlĪÀnPÉUÀ¼À£ÀÄß ¥ÀjZÀAiÀÄ ªÀiÁrPÉÆlÖgÀÄ.
·        ¢. 26-07-2011, ªÀÄAUÀ¼ÀªÁgÀzÀAzÀÄ ºÉtÄÚ ªÀÄPÀ̼À ¸À§°ÃPÀgÀt PÀÄjvÁzÀ «µÀAiÀÄzÀ ªÉÄÃ¯É ZÀZÉð ªÀiÁqÀ¯Á¬ÄvÀÄ. «ÄãÁ vÀAqÀzÀ ¸ÀzÀ¸ÀågÁzÀ PÀĪÀiÁj ±ÁAvÀªÀÄä/¨Á¥ÀÄUËqÀ, PÀĪÀiÁj AiÀiÁ¹äãï /gÀ»ªÀiÁ£ï¸Á¨ï, PÀĪÀiÁgÀ ±ÀA¨sÀİAUÀ/«oÉÆÃ¨Á ZÀZÉðAiÀÄ°è ¥Á¯ÉÆÎAqÀgÀÄ.
      ---ಸಚಿನ್ ಕುಮಾರ ಬಿ.ಹಿರೇಮಠ

Sunday, 10 July 2011

ಅಕ್ಕರೆಯ ಗುರುಗಳಿಗೆ ಸಕ್ಕರೆಯ ಬಿಳ್ಕೊಡುಗೆ..

 ಮುಖ್ಸಗುರುಗಳಿಂದ ಸನ್ಮಾನಿತರಾಗುತ್ತಿರುವ ಶ್ರೀ ಗುಂಡಪ್ಪ ಸರ್
ವತ್ತಿನ ದಿನ ನಮ್ಮ ಕೊಡಚಿ ಶಾಲೆಯ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ, ಶಿಕ್ಷಕರುಗಳಿಗೆ ದುಃಖದಾಯಕವಾದ ದಿನ. ಕಾರಣ ನಮ್ಮೆಲ್ಲರ ಅಕ್ಕರೆಯ ಶಿಕ್ಷರಾದ ಶ್ರಿ ಗುಂಡಪ್ಪಅವರಿಗೆ ಸಕ್ಕರೆಯ ಬೀಳ್ಕೊಡುಗೆ. 2010-11ನೇ ಸಾಲಿನ ಶಿಕ್ಷಕರ ವರ್ಗಾವಣೆಯಲ್ಲಿ ಸಮೀಪದ ಸ.ಮಾ.ಹಿ.ಪ್ರಾ.ಶಾಲೆ ಆಂದೋಲಾಗೆ ವರ್ಗಾವಣೆಯಾಗಿರುವ ಅವರದು ಅಂದು ನಮ್ಮ ಶಾಲೆಯಲ್ಲಿ ಕೊನೆಯ ಸೇವೆಯ ದಿನ.
 02-08-2002ರಂದು ಸೇವೆಗೆ ಸೇರಿದ ಶ್ರೀ ಗುಂಡಪ್ಪ ಅವರದು ಒಂಬತ್ತು ವರ್ಷಗಳ ಪ್ರಾಮಾಣಿಕ ಸೇವೆ. ಯಾರೇನೆ ಅಂದರು ಎಲ್ಲವನ್ನು ಕ್ಷಮಾಗುಣದಿಂದ ಪರಿಭಾವಿಸುವ ಪ್ರವೃತ್ತಿ. ಪ್ರಾಥಮಿಕ ಹಂತದ ಮಕ್ಕಳಿಗಂತೂ ಗುಂಡಪ್ಪ ಸರ್ ಅಂದರೆ ಪಂಚಪ್ರಾಣ. ಅವರು ರಜೆಯ ಮೇಲಿದ್ದರಂತೂ ಅವರನ್ನು ವಿಚಾರಿಸದ ಮಕ್ಕಳೇ ಇಲ್ಲ..
ಪಾಠ- ಪ್ರವಚನಗಳೂ ಅಷ್ಟೇ, ಮಕ್ಕಳ ಮಟ್ಟಕ್ಕಿಳಿದು ಮಕ್ಕಳಂತಾಗಿ ಕಲಿಸುವ ಅವರ ಕಲಿಕಾ ಚಟುವಟಿಕೆಗಳು ತೀರಾ ಸುಲಭ. ಸರಳ ಮತ್ತು ಅಷ್ಟೇ ಸಂತಸದಾಯಕವಾಗಿದ್ದವು. 40ರ ಆಸುಪಾಸಿನಲ್ಲಿದ್ದರೂ ಅವರ ಉತ್ಸಾಹದ ಚಿಲುಮೆಗೆ ಬರವಿಲ್ಲ. ಹೊಸದಾಗಿ ಬಂದ ನಾವು ಕೆಲವೊಂದು ಸಲ ಬೇಸರಿಸಿಕೊಂಡರೂ ಗುಂಡಪ್ಪ ಅವರಂತು ಒಂದಿಷ್ಟೂ ಬೇಸರಿಸಿಕೊಳ್ಳದೇ ನಮಗೆ ಸ್ಫೂರ್ತಿ ನೀಡುತ್ತಿದ್ದರು. ಈ ಎಂಟು ವರ್ಷಗಳ ಅವರಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳು ಅವಿಸ್ಮರಣೀಯ.ಅವರದು ಆಮೆಗತಿಯಾದರೂ ಫಲಿತಾಂಶ ಮಾತ್ರ ನಿಖರ ಮತ್ತು ವೇಗದ್ದು.
ಆದರೆ ಅಂದು ಅಲ್ಲಿ ನೆರೆದಿದ್ದವರ ಕಣ್ಣಾಲಿಗಳಲ್ಲಿ ಕಂಬನಿಗಳ ಮತ್ತು ಶುಭಾಶಯಗಳ ಹೊರತು ಏನೇನೂ ಇರಲಿಲ್ಲ. ಅಕ್ಕರೆಯ ಗುಂಡಪ್ಪ ಸರ್ ಗೆ ನಮ್ಮ ಕೊಡಚಿ ಶಾಲೆಯಿಂದ ಸಕ್ಕರೆಯ ಬೀಳ್ಕೊಡುಗೆ.. ನಿಮಗೆ ಶುಭವಾಗಲಿ..

    ---ಸಚಿನ್ ಕುಮಾರ ಬಿ.ಹಿರೇಮಠ

ಜೀವಕೋಶದ ಪರಿಕಲ್ಪನೆ ಮೂಡಿಸುವುದು ಹೇಗೆ?

ಜೀವಕೋಶದ 3ಡಿ ಚಿತ್ರ
ಪ್ರಾಥಮಿಕ ಹಂತದಲ್ಲಿ ಜೀವಕೋಶ ಮತ್ತು ಅದರ ಕಣದಂಗಗಳ ಪರಿಕಲ್ಪನೆಮೂಡಿಸುವುದು ವಿಜ್ಞಾನ ಶಿಕ್ಷಕರಿಗೂ ಸುಲಭವಲ್ಲ. ಆದರೂ ಕಲಿಕಾ ಪ್ರಕ್ರಿಯೆಗಳ ನಡುವೆ ಜೀವಕೋಶದ ಪರಿಕಲ್ಪನೆ ವಿದ್ಯಾರ್ಥಿಗಳಲ್ಲಿ ಸುಲಭವಾಗಿ ಮೂಡುವಂಥದಲ್ಲ. ಜೀವಕೋಶದ ವ್ಯಾಖ್ಯೆಯನ್ನು ಗಮನಿಸಿದಾಗ ಸಜೀವಿಗಳ ದೆಹದ ರಚನಾತ್ಮಕ ಮತ್ತು ಕಾರ್ಯನಿರ್ವಾಹಕ ಘಟಕವೇ ಜೀವಕೋಶ ಎಂದು. ಅಂದರೆ ಜೀವಕೋಶವು ದೇಹದ ರಚನೆಯಲ್ಲಿ ಮತ್ತು ವಿವಿಧ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಅಲ್ಲದೆ ನಮ್ಮ ದೇಹವು ಬೇರೆ ಬೆರೆ ಜೀವಕೋಶಗಳಿಂದ ರಚನೆಯಾಗಿದೆ ಎಂಬುದನ್ನು ತಿಳಿಸಿಕೊಡಬೇಕು. ಉದಾಹರಣೆಗೆ ಚರ್ಮದ ಜೀವಕೋಶಗಳು, ಕ್ತದ ಜೀವಕೋಶಗಳು, ಸ್ನಾಯು ಜೀವಕೋಶಗಳು ಮೂಳೆಯ ಜೀವಕೋಶಗಳು ಹೀಗೆ ಅನೇಕ ಅಂಗಗಳು ಅಂಗಾಂಶಗಳಿಂದ, ಅಂಗಾಂಶಗಳು ಒಂದೇ ವಿಧದ ಜೀವಕೋಶಗಳಿಮದ ರಚನೆಯಾಗಿವೆ ಎಂಬುದನ್ನು ತಿಳಿಸಿಕೊಡಬೇಕು. ಒಂದು ಕಟ್ಟಡ ಹೇಗೆ ಇಟ್ಟಿಗೆಗಳಿಂದಾಗಿದೆಯೋ ಅದೇ ರೀತಿ ನಮ್ಮ ದೇಹದ ಭಾಗಗಳು ಜೀವಕೋಶಗಳೆಮಬ ಕಿರು ಇಟ್ಟಿಗೆಗಳಿಂದಾಗಿವೆ ಎಂದು ಹೋಲಿಸಿ ಅನುಗಮನ ವಿಧಾನದಿಂದ ಮನಗಾಣಿಸಬೆಕು. ನಮ್ಮ ದೇಹದಲ್ಲಿ ಹೇಗೆ ಬೇರೆ ಬೇರೆ ಅಂಗಗಳಿವೆಯೊ ಅದೇ ರೀತಿ ಜೀವಕೋಶದಲ್ಲೂ ಬೇರೆ ಬೇರೆ ಭಾಗಗಳಿವೆ, ಇವನ್ನೇ ನಾವು ಕಣದಂಗಗಳು ಎಂದು ಕರೆಯುತ್ತೇವೆ ಎಂದುಹೇಳಬೇಕು.
 ಮುಮದುವರೆದಂತೆ ಬೆರೆ ಬೇರೆ ಕಣದಂಗಗಳ ಕಾರ್ಯಗಳನ್ನು ಶಿಕ್ಷಕರು ವಿವಿಧ ಮಾದರಿಗಳನ್ನು ಬಳಸಿ ಪ್ರದರ್ಸಿಸಬೇಕು. ವಿದ್ಯಾರ್ಥಿಗಳಿಗೆ ಜೀವಕೋಶದ ಪರಿಕಲ್ಪನೆ ಮನದಟ್ಟಾದ ಮೇಲೆ ಮಾತ್ರ ವಿವಿಧ ಅಂಗಾಂಶಗಳ ಕುರಿತು ತಿಳಿಸುವುದು ಒಳಿತು. ಅಲ್ಲದೆ ಪ್ರತಿ ವಿಜ್ಞಾನ ಬೋಧನೆಯಲ್ಲಿ ವೈಜ್ಞಾನಿಕ ಸಂಗತಿಗಳನ್ನು ತಿಳಿಸುವುದು ಮರೆಯಬಾರದು. ಕೋಶದ ಶಕ್ತಿ ಉತ್ಪಾದನಾ ಕೇಂದ್ರ ಮೈಟೋಕಾಂಡ್ರಿಯ, ಆತ್ಮಹತ್ಯಾ ಸಂಚಿ ಲೈಸೋಸೋಮ್, ಕೋಶದ ಪ್ರೋಟೋನ್ ಕಾರ್ಕಾನೆ ರಯಬೋಸೊಮ್ ಹೀಗೆ ಪ್ರತಿಯೊಮದಕ್ಕೂ ತಕ್ಕುದಾದ ಮಾಹಿತಿ ನೀಡುತ್ತಾ ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಸಂತಸದಾಯಕವನ್ನಾಗಿ ಮಾಡಿದಲ್ಲಿ ಯಾವ ವೈಜ್ಞಾನಿಕ ಪರಿಕಲ್ಪನೆಗಳು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಲಾರವು ಎಂಬುದು ನನ್ನ ಅಭಿಪ್ರಾಯ.

             ---ಸಚಿನ್ ಕುಮಾರ .ಹಿರೇಮಠ

ಮಗುವಿಗೊಂದು ಮರ ಶಾಲೆಗೊಂದು ವನ ; ಒಂದು ಪರಿಚಯ

ಮಾನ್ಯ ಮುಖ್ಯಮಂತ್ರಿಗಳು 2011-12ನೇ ಸಾಲಿನಿಂದ ಎಲ್ಲ ಶಾಲಾ ಕಾಲೇಜುಗಳಲ್ಲಿ ಮಗುವಿಗೊಂದು ಮರ ಶಾಲೆಗೊಂದು ವನ ಎಂಬ ವಿನೂತನವಾದ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದರು. ಇದರ ಕ್ರಕಾರ 5ನೇ ತರಗತಿಯಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ತಮ್ಮ ಇಷ್ಟದಂತೆ ಶಾಲೆಯ ಆವರಣದೊಳಕ್ಕೆ ಹಾಗೂ ತಮ್ಮ ಮನೆಯ ಸುತ್ತಮುತ್ತ ಒಂದೊಂದು ಸಸಿ ನೆಡುವುದು. ನಿರಂತರವಾಗಿ ಆ ಸಸಿಯನ್ನು ತನ್ನದೇ ಎಂಬಂತೆ ನೀರೆರೆದು ಪೋಷಣೆ ಮಾಡುವುದು. ಹೀಗೆ ವಿದ್ಯಾರ್ಥಿಗಳೇ ಸ್ವಯಂ ಸಸಿ ನೆಡುವುದರಿಮದ ಶಾಲೆಯಲ್ಲಿ ಒಂದು ವನವನ್ನೇ ಸೃಷ್ಟಿ ಮಾಡಬಹುದು, ಶಾಲಾ ವಾತಾವರಣವನ್ನು ಪರಿಸರ ಸ್ನೇಹಿಯನ್ನಾಗಿ ಮಾಡಬಹುದು.
   ಶಿಕ್ಷಕ ಮಿತ್ರರೇ ನನ್ನ ಒಂದು ಸ್ವಾನುಭವವನ್ನು ನಾನಿಲ್ಲಿ ಒಂದಿನಿತು ಪ್ರಸ್ತಾಪಿಸುತ್ತೇನೆ. ನಾನು 3ನೇ ವರ್ಗದಲ್ಲಿದ್ದಾಗ ನಮ್ಮ ಶಿಕ್ಷಕರ ಆಣತಿಯಂತೆ ನಮ್ಮ ಶಾಲೆ(ಸರ್ಕಾರಿ ರನ್ನ ಮಾದರಿಯ ಪ್ರಾಥಮಿಕ ಶಾಲೆ ಮುಧೋಳ)ದಲ್ಲಿ ಒಂದು ಸಸಿ ನೆಟ್ಟು ಅದಕ್ಕೇ ನಮ್ಮದೇ ಹೆಸರನ್ನಿಟ್ಟು ಅದನ್ನು ಪೋಷಿಸುತ್ತ ಬಂದೆವು. ನಾನು 5ನೇ ತರಗತಿ ಮುಗಿಸುವ ಹೊತ್ತಿಗೆ ಅದು ನನ್ನಷ್ಟು  ಎತ್ತರ ಬೆಳೆದಿತ್ತು. ಈಗ ಆ ಶಾಲೆ ತೊರೆದು ಸುಮಾರು 15ವರ್ಷಗಳಾಗಿವೆ.ಈಗಲೂ ಆ ಮರವನ್ನು ಕಂಡಾಗ ಎಲ್ಲಿಲ್ಲದ ಖುಷಿಯಾಗುತ್ತದೆ. ಇದೇ ರೀತಿ ನಾವು ನಮ್ಮ ಶಾಲಾ ವಾತಾವರಣದಲ್ಲಿ ವಿದ್ಯಾರ್ಥಿಗಳಿಂದ ಸಸಿ ನೆಡಿಸಿದಾಗ ವಿದ್ಯಾರ್ಥಿಗಳಲ್ಲಿ ನೈಜವಾದ ಪರಿಸರ ಪ್ರೇಮ ಒಡಮೂಡುತ್ತದೆ.
                ಉತ್ತಮವಾದ ಶಾಲಾ ಕಾಂಪೌಂಡ್ ಹೊಂದಿದ ಶಾಲೆಗಳಂತೂ ನಿಜವಾಗಿಯೂ ಒಂದು ಸುಂದರ ವನದಂತೆ ತೋರುತ್ತವೆ.
  ನಮ್ಮ ಕೊಡಚಿ ಶಾಲೆಯ ವಾತಾವರಣ ಹೀಗಿಲ್ಲ. ನಮ್ಮ ಶಾಲಾ ಕಟ್ಟಡಗಳು ಅಲ್ಲಲ್ಲಿ ಹಂಚಿ ಹೋಗಿರುವುದರಿಂದ ಆಯಾ ತರಗತಿ ಗಳಮುಂದೆಯೇ ನಮ್ಮ ವಿದ್ಯಾರ್ಥಿಗಳು ಸಸಿ ನೆಡಲು ಸಿದ್ಧರಾಗಿದ್ದಾರೆ. ಎಲ್ಲ ಶಿಕ್ಷಕರುಈಒಂದು ಸುಂದರ ಪರಿಸರ ಸ್ನೇಹಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಿ.. Best of luck Teachers....

---ಸಚಿನ್ ಕುಮಾರ ಬ.ಹಿರೇಮಠ

Monday, 30 May 2011

ಮತ್ತಷ್ಟು ಫೋಟೋಗಳು...

ಕೊಡಚಿ ಶಾಲೆಯ ಇಂಗ್ಲಿಷ್ ಶಿಕ್ಷಕರಾದ ಮಂಜುನಾಥ ಎಸ್.ಜೆ  ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ.. 

ಮಧ್ಯಾಹ್ನದ ಬಿಸಿಯೂಟದೊಂದಿಗೆ ಸಿಹಿ ಕೇಸರಿಬಾತ್ ಸವಿಯುತ್ತಿರುವ ಚಿಣ್ಣರು

ಆಹಾ..! ಏನ್ ಸಿಹಿನಪ್ಪಾ ಅನ್ನ ಸಾಂಬಾರೂ...ಹ್ಹಂ...


ನಡೆಯಿರಿನ್ನು..ಮನೆಗೆ.. ಮತ್ತೆ ನಾಳೆ ಶಾಲೆಗೆ..




ಕೊಡಚಿ ಗ್ರಾಮದ ಪ್ರಮುಖರಿಂದ ಉಚಿತ ಪಠ್ಯ ಪುಸ್ತಕ ವಿತರಣೆ


ಗ್ರಾಮದ ಪ್ರಮುಖರಿಂದ ಉಚಿತ ಸಮವಸ್ತ್ರ ವಿತರಣೆ

ಗ್ರಾಮದ ಪ್ರಮುಖರು ಮತ್ತು ಪೋಷಕರು ಶಾಲಾ ಪ್ರಾರಂಭೋತ್ಸವದಲ್ಲಿ ಹಾಜರಿದ್ದರು.


                                                 ---ಸಚಿನ್ ಕುಮಾರ ಬಿ.ಹಿರೇಮಠ

ಶಾಲಾ ಪ್ರಾರಂಭೋತ್ಸವದ ಚಿತ್ರ ವಿಚಿತ್ರಗಳು..

ಶಾಲೆಗೆ ಬಂದ ಚಿಣ್ಣರು..

ತಮ್ಮದೇ ಚಿನ್ನಾಟದಲ್ಲಿ ನಿರತರಾದ ಚಿಣ್ಣರು..


ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಿಸುತ್ತಿರುವ ಗ್ರಾಮದ ಪ್ರಮುಖರು..

ಮತ್ತೇ ಶುರುವಾಯಿತು ನಮ್ಮ ಕೊಡಚಿ ಶಾಲೆ...

ಮತ್ತೇ ಶುರುವಾಯಿತು ನಮ್ಮ ಕೊಡಚಿ ಶಾಲೆ. ಹೌದು ಇಂದು ದಿನಾಂಕ 30 ನೇ ಮೇ,2011. ಕೊಡಚಿ ಗ್ರಾಮದ ಪೋಷಕರಲ್ಲಿ, ಮಕ್ಕಳಲ್ಲಿ ಹಾಗೂ ಶಿಕ್ಷಕರ ಮನದಲ್ಲಿ ಏನೋ ತಳಮಳ. 20-25 ದಿನಗಳಿಂದ ಶಾಲೆಯಿಂದ ದೂರವೇ ಉಳಿದ ಮಕ್ಕಳಿಗೆ ಶಿಕ್ಷಕರಿಗೆ ಮತ್ತೇ ಸಮ್ಮಿಲನದ ಪರಮಾನಂದ. ಶಾಲೆಯ ಕಟ್ಟಡ ನವವಧುವಿನಂತೆ ಸಿಂಗರಿಸಿಕೊಂಡು ನಿಂತಿತ್ತು.

ನವವಧುವಿನಂತೆ ಸಿಂಗರಿಸಿಕೊಂಡ ನಲಿಕಲಿ ಶಾಲಾ ಕೋಣೆ
 ಶಿಕ್ಷಕರೆಲ್ಲ ದಿ.27ಕ್ಕೇ ಶಾಲೆಗೆ ಬಂದು ಸ್ವಚ್ಛತಾ ಕಾರ್ಯ, ಶಾಲಾ ವೇಳಾಪಟ್ಟಿ, ಶಾಲಾ ಪಂಚಾಂಗ, ವರ್ಗವಾರು ಪಠ್ಯ ವಿಭಜನೆ ಮುಂತಾದ ಕೆಲಸ ಕಾರ್ಯಗಳನ್ನು ಮುಗಿಸಿದೆವು. ನಮ್ಮ ಮುಖ್ಯೋಪಾಧ್ಯಾಯರಾದ ಶ್ರೀ ಹರಿಶ್ಚಂದ್ರ ನಾಯಕ್ ಅವರು ಸಹಶಿಕ್ಷಕರೊಂದಿಗೆ ಸೇರಿ ಸಿದ್ಧತೆಯ ಬಹುಪಾಲು ಕೆಲಸವನ್ನು ಮುಗಿಸಲು ನೆರವಾದರು.
                                                --ಸಚಿನ್  ಕುಮಾರ ಬಿ.ಹಿರೇಮಠ

ಬಣ್ಣ ಬಳಿದುಕೊಂಡು ಸಿಂಗಾರಗೊಂಡ ಕೊಡಚಿ ಶಾಲೆಯ ಕಾರ್ಯಾಲಯ













Tuesday, 24 May 2011

ಮೀನಾ...

ಮೀನಾ,
1990 ರ ಸುಮಾರಿಗೆ ದೂರದರ್ಶನದಲ್ಲಿ ಕೇಳುತ್ತಿದ್ದ ಹೆಸರು. ಮೀನಾ, ಮೀನಾನ ತಮ್ಮ ,ಮಿಟ್ಟು ಗಿಳಿ ಮತ್ತು ಮೀನಾನ ತಂದೆ ತಾಯಿ - ಇವರೆಲ್ಲಾ ಮೀನಾ ಕುಟುಂಬದ ಸದಸ್ಯರು. ತ್ಮಮ ಬಡತನದಿಂದಾಗಿ ಮೀನಾಳನ್ನು ಶಾಲೆ ಬಿಡಿಸುವ ಪ್ರಯತ್ನದಲ್ಲಿ ಅವಳ ಪೋಷಕರು ಇರುತ್ತಾರೆ. ಆದರೆ ದಿಟ್ಟ ಹುಡುಗಿ ಮೀನಾ ತನ್ನ ಜಾಣ್ಮೆಯಿಂದಾಗಿ ಶಾಲೆ ತೊರೆಯದೇ ತನ್ನ ಕುಟುಂಬದ ಸಮಸ್ಯೆಯನ್ನೆಲ್ಲ ನೀಗಿಸುತ್ತಾಳೆ. ಕೆಲವೊಂದು ದಿನ ಮೀನಾ ಶಾಲೆ ತೊರೆದಾಗ ಮೀನಾ ತನ್ನ ಮಿಟ್ಟು ಗಿಳಿಯನ್ನು ಶಾಲೆಗೆ ಕಳುಹಿಸಿ ತಾನು ಅದರಿಂದ ಕಲಿಯುತ್ತಾಳೆ. ಹೀಗೆ ಮೀನಾ ಎಂಬ ಮುದ್ದು ಮನಸ್ಸಿನ ದಿಟ್ಟ ಹುಡುಗಿಯ ಕೆಲವು ಸ್ವರಸ್ಯಕರ ಕಥೆಗಳಿಂದಾಗಿ ರಾಜ್ಯದ ಎಲ್ಲ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಹಿಳಾ ಸಬಲೀಕರಣದ ಹಿನ್ನೆಲೆಯಾಗಿಸಿ 'ಮೀನಾ' ಎಂಬ ಕಾರ್ಯಕ್ರಮವನ್ನು ಜಾರಿ ತರಲಾಗಿದೆ.

ಪ್ರತಿ ಶಾಲೆಗಳಲ್ಲಿ ಮೀನಾ ಎಂಬ ಇಪ್ಪತ್ತು ವಿದ್ಯಾರ್ಥಿಗಳ ತಂಡವೊಂದನ್ನು ರಚಿಸಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಮೀನಾ ಕಾರ್ಯಕ್ರಮದ ಉದ್ದೇಶಗಳು :
ಹೆಣ್ಣು ಮಕ್ಕಳ ಶಿಕ್ಷಣ
ಶಾಲಾ ಹಂತದಿಂದಲೇ ಮಹಿಳಾ ಸಬಲೀಕರಣ
ಗ್ರಾಮೀಣ ಪ್ರದೇಶಗಳಲ್ಲಿನ ಮೂಢನಂಬಿಕೆಗಳ ತೊಡೆದುಹಾಕುವಿಕೆ
ಜೀವನ ಕೌಶಲಗಳು


ಜನಜಾಗೃತಿ


ನಮ್ಮ ಶಾಲೆಯ ಮೀನಾ ಕಾರ್ಯಕ್ರಮಗಳು ಹೀಗಿವೆ :


ಶಾಲೆ ತೊರೆದ ಮಕ್ಕಳ ಮನೆಗೆ ಭೇಟಿ ನೀಡಿ ಕರೆತರಲಾಗಿದೆ. ಮರೆಮ್ಮ ತಂದೆ ಧರ್ಮಣ್ಣ ಎಂಬ ಹುಡುಗಿಯನ್ನು ಪೋಷಕರೇ ಶಾಲೆ ಬಿಡಿಸಿ ಕೂಲಿಗೆ ಕಳುಹಿಸುತ್ತಿದ್ದಾಗ ನಮ್ಮ ಮೀನಾ ತಂಡ ಆ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಮಗುವನ್ನು ಶಾಲೆಗೆ ಕಳುಹಿಸುವಂತೆ ಮಾಡಿತು.


ಬೀದಿ ನಾಟಕಗಳ ಮೂಲಕ ಜನ ಜಾಗೃತಿ. 26ನೇ ಜನವರಿ 2011 ರಂದು ಗ್ರಾಮದ ಬಸವಣ್ಣ ದೇವರ ಗುಡಿಯ ಮುಂದೆ 'ಅವ್ವಾ ನನ ಮಾತ ಕೇಳವ್ವ' ಎಂಬ ಬೀದಿನಾಟಕ ಪ್ರದರ್ಶನ.


ಮೀನಾ ತಂಡದ ವಿದ್ಯಾರ್ಥಿನಿಯರಿಂದ ಬೀಸಣಿಗೆ,ರಸ್ನಾ ಪೌಡರ್, ಮಾಲೆ,ಮಣ್ಣಿನ ಮಾದರಿಗಳ ತಯಾರಿಕೆ


ಈ ಎಲ್ಲ ಉತ್ತಮ ಕಾರ್ಯಕ್ರಮಗಳ ಹಿಂದೆ ನಮ್ಮ ತಾಲ್ಲೂಕಿನ ಕ್ಷೆತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಚಂದ್ರಶೇಖರ್, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ರುದ್ರಗೌಡ ಪಾಟೀಲ್,ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮೋನಪ್ಪ ಬಡಿಗೇರ್ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಚಿಯ ಮುಖ್ಯ ಗುರುಗಳಾದ ಶ್ರೀ ಹರಿಶ್ಚಂದ್ರ ನಾಯಕ್ ಅವರ ಶ್ರಮ ಇದೆ.


ಮೀನಾ ತಂಡ ದ ಮಕ್ಕಳಿಂದ ಮೀನಾ ಶಾಲೆಗೆ ಹೋಗುವುದು ಬಿಡಬೇಕಾಗುತ್ತದೆಯೇ? ಎಂಬ ನಾಟಕ
ಮೀನಾ ತರಬೆತಿಯಲ್ಲಿ ಅನಿವಾರ್ಯವಾಗಿ ಮೀನಾ ಶಾಲೆ ಬಿಡಬೇಕಾಗಿ ಬರುತ್ತದೆ. ಆಗ ಶಿಕ್ಷಕಿಯ ಮಾರ್ಗದರ್ಶನದಲ್ಲಿ ಮೀನಾ ಮತ್ತು ಅವಳ ಕುಟುಂಬ ಆ ಅನಿವಾರ್ಯತೆಯಿಂದ ಹೊರಬಂದು ಮೀನಾ ಳನ್ನು ಶಾಲೆ ತೊರೆಯದಂತೆ ಮಾಡುತ್ತಾರೆ. ಇದೇ ಕಥೆಯನ್ನು ಮೀನಾ ತಂಡದ ಮಕ್ಕಳು ಅಭಿನಯಿಸಿ ಪ್ರದರ್ಶಿಸುತ್ತಿರುವುದು.


ಮೀನಾ ತಂಡದ ಮಕ್ಕಳಿಗೆ ಸಹ ಶಿಕ್ಷಕರಾದ ಸಚಿನ್ ಕುಮಾರ ಬಿ.ಹಿರೇಮಠ ಅವರಿಂದ ಕ್ರಾಫ್ಟ್ ವರ್ಕ್ ಬಗ್ಗೆ ಕುರಿತು ಮಾರ್ಗದರ್ಶನ
 ಮಕ್ಕಳಿಗೆ ಕರಕುಶಲತೆಯಲ್ಲಿ ಆಸಕ್ತಿ ಮೂಡಿಸಲು ಕ್ರಾಫ್ಟ್ ವರ್ಕ್ ಬಗ್ಗೆ ಮಾಹಿತಿ ನೀಡಿದರು.

ಮೀನಾ ಕುಟುಂಬ..

ಮೀನಾ ತಂಡದ ಸದಸ್ಯರನ್ನು ಒಳಗೊಂಡ ಪುಟ್ಟ ಕುಟುಂಬದ ಪಾತ್ರಧಾರಿಗಳು. ಒಟ್ಟಿನಲ್ಲಿ ಎಲ್ಲಾ ಮೀನಾ ತಂಡದ ಮಕ್ಕಳು ಉತ್ಸಾಹದೊಂದಿಗೆ ಪಾಲ್ಗೊಂಡು NPEGEL ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಕಾರಣರಾದರು.
  ---ಸಚಿನ್ ಕುಮಾರ ಬಿ.ಹಿರೇಮಠ  ಶಿಕ್ಷಕರು