ಇಂದು ದಿ.೩೧.೧೦.೨೦೧೪ ರಂದು ನಮ್ಮ ಕೊಡಚಿ ಶಾಲೆಯಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ರ ಜನ್ಮದಿನ ಅಂಗವಾಗಿ 'ರಾಷ್ಟ್ರೀಯ ಏಕತಾ ದಿವಸ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸರ್ದಾರ್ ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಆದರ್ಶಗಳನ್ನು ಹಾಗೂ ಅವರು ಏಕತೆಗಾಗಿ ನಡೆಸಿದ ಹೋರಾಟವನ್ನು ವಿದ್ಯಾರ್ಥಗಳಿಗೆ ತಿಳಿಸಲಾಯಿತು. ನಂತರ ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು .
ಈ ಆಚರಣೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಎಲ್ಲ ಸಹ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Friday 31 October 2014
ರಾಷ್ಟ್ರೀಯ ಏಕತಾ ದಿವಸ ಆಚರಣೆ
Thursday 23 October 2014
Monday 13 October 2014
ಯೋಜನಾ ಕಾರ್ಯಗಳು ; ಒಂದು ಪೂರಕ ಕಲಿಕೆ
ವಿಜ್ಞಾನ ಕಲಿಕೆಗೆ ನಿರರ್ಗಳ ಬೋಧನಿಯೊಂದೆ ಸಾಕಾಗುವುದಿಲ್ಲ. ಶಿಕ್ಷಕರ ಜ್ಞಾನ, ಸಮರ್ಪಣೆ ಜೊತೆಗೆ ಯೋಜನಾ ಕಾರ್ಯಗಳು ಮಹತ್ತರ ಪಾತ್ರವಹಿಸುತ್ತವೆ. ಇದರಿಂದ ವಿದ್ಯಾರ್ಥಿಗಳು ಸ್ವತಃ ಕಲಿಯುವುದರಿಂದ ಕಲಿಕೆ ಬಲಗೊಳ್ಳುವುದಲ್ಲದೆ ಉತ್ಸಾಹದಿಂದ ಕಾರ್ಯ ಪ್ರವೃಟಿಟರಾಗುವೌತೆ ಮಾಡುತ್ತದೆ.
ಯೋಜನಾ ಕಾರ್ಯಗಳ ಪ್ರಾಮುಖ್ಯತೆ:
1. ವಿದ್ಯಾರ್ಥಿಗಳ ಗಮನ ಹಾಗೂ ಏಕಾಗ್ರತೆಯನ್ನು ಹಿಡಿದಿಡುತ್ತವೆ.
2. ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುತ್ತವೆ.
3. ವೈಜ್ಞಾನಿಕ ಚಿಂತನೆ ಬೆಳೆಸುತ್ತವೆ.
4. ಗುಂಪಿನಲ್ಲಿ ಮಾಡುವ ಚಟುವಟಿಕೆಗಳು ಸಹಕಾರ ಗುಣವನ್ನು ಬೆಳೆಸುತ್ತವೆ.
5. ತರಗತಿಯಾಚೆಗೂ ಕಲಿಕೆಯನ್ನು ಪ್ರೇರೇಪಿಸುತ್ತವೆ.
ಶಿಕ್ಷಕರು ಏನೇನು ಮಾಡಬಹುದು?
ಶಿಕ್ಷಕರು ಯೋಜನಾ ಕಾರ್ಯಗಳಲ್ಲಿ ಕೇವಲ ಅನುಕೂಲಿಗಳಾಗಿ ಮಾರ್ಗದರ್ಶನ ನೀಡಬೇಕು. ಆದರೂ ವಿದ್ಯಾರ್ಥಿಗಳಿಗೆ ಹೊಸ ಕಲಿಕೆಗೆ ಅಥವಾ ಸಂಶೋಧನೆಗೆ ಎಡೆ ಮಾಡಿಕೊಡುವಂತ ವಿಷಯಗಳನ್ನು ನೀಡಬೇಕು.
ತೀರಾ ಅಪಾಯಕಾರಿಯಾದ ಅಥವಾ ಕಷ್ಟಕರವಾದ ವಿಷಯಗಳನ್ನು ನೀಡದೆ ಸುಲಭವಾಗಿ ಹಾಗೂ ಸ್ಪಷ್ಟವಾಗಿರುವ ವಿಷಯಗಳನ್ನು ನೀಡಬೇಕು.
ಪ್ರದರ್ಶನ:
ಯೋಜನಾ ಕಾರ್ಯಗಳು ಕೇವಲ ದಾಖಲೆಗಳಾಗಿ ಮಾತ್ರವಾಗದೆ ಅವು ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಕನ್ನಡಿಯಾಗಿರಬೇಕು. ಪೋಷಕರಿಗೂ ಪ್ರದರ್ಶನ ಮಾಡುವುದರಿಂದ ಉಳಿದವರಿಗೂ ಸ್ಫೂರ್ತಿಯಾಗುತ್ತದಿ.
ಒಟ್ಟಿನಲ್ಲಿ ಕಲಿಕೆಯ ಜೊತೆಗೆ ಪೂರಕ ಕಾರ್ಯಗಳು ಕಲಿಕೆಯನ್ನು ಉತ್ತೇಜಿಸುತ್ತವೆ.
--ಸಚಿನ್ ಕುಮಾರ
ಒಒಎಸ್ ಸಿ ಮಗುವಿನ ದಾಖಲು..
ಶಾಲೆಯಿಂದ ಹೊರಗುಳಿದ.ಮಗುವಾದ ಮಲ್ಲಿಕಾರ್ಜುನ ಮರೆಪ್ಪ ಅವರ ಮನೆಗೆ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಭೇಟ್ ನೀಡಿ ದಾಖಲು ಮಾಡಿಕೊಳ್ಳಲಾಯಿತು.
Saturday 11 October 2014
Thursday 2 October 2014
ಸ್ವಚ್ಛ ಭಾರತ ; ಶ್ರೇಷ್ಠ ಭಾರತ
ಈ ಸಲದ ಗಾಂಧೀ ಜಯಂತಿ ತುಂಬಾ ವಿಶೇಷವಾಗಿತ್ತು. ಮಹಾತ್ಮ ಗಾಂಧೀ ಅವರ ಸ್ವಚ್ಛ ಭಾರತ ಕಲ್ಪನೆಗೆ ಗರಿ ಮೂಡಿತ್ತು. ಬಿಳಿಗ್ಗೆ 8.55ಕ್ಕೆ ಶಾಲೆಯ ಆವರಣದಲ್ಲಿ ಎಲ್ಲ ಶಿಕ್ಷಕರು ಎಸ್.ಡಿ.ಎಂ.ಸಿ ಸದಸ್ಯರು ಹಳೆಯ ವಿದ್ಯಾರ್ಥಿಗಳು ಸೇರಿ ಶಾಲಾ ಸುತ್ತಮುತ್ತಲಿನ ಪ್ರದೇಶವನ್ನೆಲ್ಲ ಸ್ವಚ್ಛಗೊಳಿಸಲಾಯಿತು. ಬಳಿಕ.ಅರ್ಥಪೂರ್ಣವಾಗಿ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಅವರ ಜನ್ಮದಿನವನ್ನು ಆಚರಿಸಲಾಯಿತು. ಆಚರಣೆಯ ಒಂದಿಷ್ಟು ಫೋಟೊಗಳು..